Friday, October 21, 2016



                                              ಗಾಂಧೀ, ಶಾಸ್ತ್ರಿ ಜನ್ಮದಿನಾಚರಣೆ 

ನಮ್ಮ ಶಾಲೆಯಲ್ಲಿ ಸುಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಕಾರ್ಯಕ್ರಮ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಈ ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಗೈದರು. ಈ ಸಂದರ್ಭದಲ್ಲಿ ಅವರು ಅಹಿಂಸೆ, ಸರಳತೆ, ಶುಚಿತ್ವ ಗಾಂಧೀಜಿಯವರ ವ್ಯಕ್ತಿತ್ವದ ಪ್ರಮುಖ ಗುಣಗಳು ಅದೇ ರೀತಿ ಶಾಸ್ತ್ರಿ ಯವರ ಜೀವನದ ಕೆಲವು ಮುಖ್ಯ ಪ್ರಸಂಗಗಳನ್ನು ನೆನಪಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ರವರು ಗಾಂಧೀಜಿಯವರ ಪ್ರಾರ್ಥನಾ ಶ್ಲೋಕವಾದ ರಘುಪತಿ ರಾಘವ ಎಂಬ ಗೀತೆಯನ್ನು ಹಾಡಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಶ್ರುತಿ ಕೆ ಗಾಂಧೀಜಿಯವರ ಹಾಗೂ ಮಾಸ್ಟರ್ ಆಶ್ರಿತ್ ವೈ ಶಾಸ್ತ್ರಿ ಯವರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಸೇವಾ ದಿನದ ಅಂಗವಾಗಿ ಶಾಲಾ ಪರಿಸರವನ್ನು ಶಿಕ್ಷರು ಮಕ್ಕಳು ಸೇರಿಕೊಂಡು ಸ್ವಚ್ಛಗೊಳಿಸಲಾತು.