Thursday, December 10, 2015



                                         ಬಯಲು ವೀಕ್ಷಣೆ

ನಮ್ಮ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿಗಳು ಪ್ರಕೃತಿ ವೀಕ್ಷಣೆಗಾಗಿ ಸಮೀಪದ ವಾಣೀನಗರ ರಕ್ಷಿತಾರಣ್ಯಕ್ಕೆ ಭೇಟಿಯಿತ್ತರು. ಅರಣ್ಯದ ಹೊರಗೆ ನಾವು ಅನುಭವಿಸುವ ಬಿಸಿ ವಾತಾವರಣ ಮತ್ತು ಕಾಡಿನೊಳಗಿರುವ ತಂಪಿನ ವಾತಾವರಣವು ವಿದ್ಯಾರ್ಥಿಗಳಿಗೆ ಖುಷಿ ತಂದಿತು, ಕಾಡಿನಲ್ಲಿ ನೆಲ್ಲಿಕಾಯಿ, ಮುಳ್ಳುಕಾಯಿಗಳನ್ನು ಸವಿಯುತ್ತಾ, ಒರತೆಯ ನೀರಿನ ತಂಪನ್ನನುಭವಿಸುತ್ತಾ ವಿವಿಧ ಪ್ರಾಣಿ ಪಕ್ಷಿಗಳ ಸ್ವಚ್ಛಂದ ಹಾರಾಟವು ಮನಸ್ಸಿಗೆ ಮುದ ನೀಡಿತು. ಇಂಗ್ಲಿಷ್ ಪಠ್ಯಕ್ಕನುಸರಿಸಿ 'ನೇಚರ್ ವಾಕ್' ಸಂಬಂಧಿಸಿ ಆಯೋಜಿಸಲಾದ ಈ ಬಯಲು ವೀಕ್ಷಣೆಗೆ ಶಿಕ್ಷಕ ಸಚ್ಚಿದಾನಂದ.ಎಸ್ ನೇತೃತ್ವ ನೀಡಿದ್ದರು. ಭವಿಷ್ಯದಲ್ಲಿ ಕಾಡನ್ನು ಉಳಿಸಿ ಬೆಳೆಸುವ ಅಗತ್ಯ ಸಂಕಲ್ಪವನ್ನು ವಿದ್ಯಾರ್ಥಿಗಳು ಮನಗಂಡರು. 







                               ನಮ್ಮ ಶಾಲೆಯ ಕೃಷಿ ಚಟುವಟಿಕೆಗಳು




           ಪ್ರಾಕೃತಿಕ ಕೆರೆಗಳ ಸಂದರ್ಶನ

ನಮ್ಮ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿಗಳು ಮಲ್ಲತಡ್ಕ-ಮೂಲಸ್ಥಾನ ಸಮೀಪವಿರುವ ಹಲವು ಜೀವಿಗಳ ವಾಸಸ್ಥಾನವಾಗಿರುವ ಕೆರೆಗಳನ್ನು ಸಂದರ್ಶಿಸಿದರು. ಕಾಡು ಮರಗಳಿಂದ ಸುತ್ತುವರಿದು ನಿರಂತರ ಒರತೆಯಿಂದ ತುಂಬಿ ಹರಿಯುತ್ತಿರುವ ಹಲವು ಕೆರೆಗಳು ಈ ಪ್ರದೇಶದಲ್ಲಿದ್ದು ವಿದ್ಯಾರ್ಥಿಗಳ ವಿeನ ಕಲಿಕೆಗೆ ಪೂರಕವಾಗಿದೆ. ಜೀವ ಪರಿಸ್ಥಿತಿವ್ಯೂಹ ಗಳಂತೆ ಕಾರ್ಯವೆಸಗುವ ನೈಸರ್ಗಿಕ ಕೆರೆಗಳನ್ನು ನೋಡಿ ಸಂಭ್ರಮಿಸಿದರು. ಕಪ್ಪೆ, ಮೀನು,ಆಮೆ, ಏಡಿ,ಹಾವು ಮುಂತಾದ ಜಲಚರಗಳಲ್ಲದೇ ಪಕ್ಷಿಗಳು, ಇನ್ನಿತರ ಕೀಟಗಳಿಗೆ ಆಶ್ರಯ ತಾಣವಾಗಿದೆ ಎಂದು ಪ್ರತ್ಯಕ್ಷ ದರ್ಶನದಿಂದ ತಿಳಿದು ಕೊಂಡರು. ಪಿ.ಟಿ.ಎ ಸದಸ್ಯರಾದ ವಿಷ್ಣು ಪ್ರಸಾದ ಕೆ.ವೈ ನೇತೃತ್ವದಲ್ಲಿ ಶಿಕ್ಷಕ ಸಚ್ಚಿದಾನಂದ ಎಸ್  ಬಯಲು ಪ್ರವಾಸವನ್ನು ಆಯೋಜಿಸಿದ್ದರು. 






                                           ಕಾವ್ಯ ಪುರಸ್ಕಾರ

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದ ೩೦ ನೇ ವರ್ಷದ ಸಾಹಿತ್ಯೋತ್ಸವದಲ್ಲಿ ರಾಜ್ಯ ಮಟ್ಟದ ವಿಶ್ವ ಕವಿ ಕುವೆಂಪು ನೆನಪಿನ ಕಾವ್ಯ ಪುರಸ್ಕಾರಕ್ಕೆ ಹೊರನಾಡ ಕನ್ನಡಿಗರಾಗಿ ಅರ್ಹತೆ ಪಡೆದ ನಮ್ಮಶಾಲೆಯ ಮಾತೃ ಸಂಘದ ಅಧ್ಯಕ್ಷೆ ಮಂಜರಿ ನವೀನ್ ರವರು ಮೈಸೂರಿನಲ್ಲಿ ಇತ್ತೀಚೆಗೆ ಜರಗಿದ ಶಿವರಾತ್ರಿ ರಾಜೇಂದ್ರ ಕಲಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. 


Thursday, December 3, 2015



                                    ಕಲೋತ್ಸವ ಪ್ರತಿಭೆ 
ಇತ್ತೀಚೆಗೆ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಒಗಟು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕು|ಪ್ರಣೀತಾ ಎಮ್.ಎಸ್, ಈಕೆ ನಮ್ಮ ಶಾಲೆಯಲ್ಲಿ ೨ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕಥೆ ಹೇಳುವ ಸ್ಪರ್ಧೆ ಹಾಗೂ ಶಾಸ್ತ್ರೀಯ ಸಂಗೀತಗಳಲ್ಲೂ ಉತ್ತಮ ಗ್ರೇಡನ್ನು ಪಡೆದಿರುವ, ಈಕೆ ಅಧ್ಯಾಪಕ ದಂಪತಿಗಳಾದ ಶ್ರೀ.ಸಚ್ಚಿದಾನಂದ ಎಸ್ ಹಾಗೂ ಶ್ರೀಮತಿ ಸರಸ್ವತಿಯವರ ಪುತ್ರಿಯಾಗಿರುತ್ತಾಳೆ. 


                                           *********


ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಬದಿಯಡ್ಕದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಯು.ಪಿ ಸಂಸ್ಕ್ರತ ವಿಭಾಗದಲ್ಲಿ ೭೮ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ನಮ್ಮ ಶಾಲೆಯ ಸಂಸ್ಕ್ರತ ವಿದ್ಯಾರ್ಥಿ, ವಿದ್ಯಾರ್ಥಿನಿಯರು.  ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಸಂಸ್ಕ್ರತ ಶಿಕ್ಷಕರಾದ ಕೆ. ಶಿವರಾಮ್ ಭಟ್ ಇವರೊಂದಿಗೆ.




                                                                 *********


ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಬದಿಯಡ್ಕದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ ೧೪ ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳು. ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಶಿಕ್ಷಕರಾದ ಶ್ರೀ ಸಚ್ಚಿದಾನಂದ ಎಸ್ ಇವರೊಂದಿಗೆ.




                                 ***************


Monday, November 16, 2015




               ಸಂಸ್ಕೃತ ಶಿಬಿರ ಚೈತನ್ಯಮ್  
ಕುಂಬಳೆ ಉಪ ಜಿಲ್ಲಾ ಮಟ್ಟದ ಒಂದು ದಿನದ ಸಹವಾಸ ಶಿಬಿರ ನಮ್ಮ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ರಕ್ಷಕ ಶಿಕ್ಷಕ ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಎನ್.ಎಚ್‌ಎಸ್ ಪೆರಡಾಲದ ನಿವೃತ್ತ ಸಂಸ್ಕ್ರತ ಶಿಕ್ಷಕರಾದ ಸದಾಶಿವ ಭಟ್‌ರವರು ಮುಖ್ಯ ಅಥಿತಿಯಾಗಿ ಶಿಬಿರದ ಮಹತ್ವವನ್ನು ತಿಳಿಸಿದರು. 
ಶುಭಾಶಂಸನೆಗಾಗಿ ಆಗಮಿಸಿದ ಮೊನ್ನೆ ತಾನೆ ಜರುಗಿದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜಯಗಳಿಸಿದ ನಮ್ಮ ವಾರ್ಡ್ ಸದಸ್ಯೆ ಅಂಗನವಾಡಿ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಕುಮಾರಿ ಚಂದ್ರಾವತಿ.ಎಮ್ ಹಾಗೂ ಬ್ಲಾಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡ  ಶ್ರೀಮತಿ ಸವಿತ ನಾಗರಾಜ್ ಇವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಶಿವರಾಮ್ ಭಟ್ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.ನಮ್ಮ ಶಾಲಾವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಇವರು ಉಪಸ್ಥಿತರಿದ್ದರು. ಎಸ್.ಎನ್.ಎಚ್.ಎಸ್ ಪೆರ್ಲ ಶಾಲೆಯ ಸಂಸ್ಕ್ರತ ಶಿಕ್ಷಕರಾದ ಶ್ರೀ.ರಂಜಿತ್(ಕಾಸರಗೋಡು ಸಂಸ್ಕ್ರತ ಟೀಚರ್ಸ್  ಫೆಡರೇಷನ್) ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಇದೇ ಶಾಲೆಯ ಸಂಸ್ಕ್ರತ ಅಧ್ಯಾಪಕರಾದ ಶ್ರೀ.ಕೆ ಶಿವರಾಮ್ ಭಟ್ ರವರು ಸ್ವಾಗತಿಸಿ, ಕುಂಬಳೆ ಉಪ ಜಿಲ್ಲೆಯ ಸಂಸ್ಕ್ರತ ಕೌನ್ಸಿಲ್‌ನ ಕಾರ್ಯದರ್ಶಿ ಶ್ರೀ ನಂದಕುಮಾರ್ ಇವರು ವಂದಿಸಿ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಂಬಳೆ ಉಪ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ೧೪೭ ಮಂದಿ ಶಿಬಿರಾರ್ಥಿಗಳು, ಸಂಸ್ಕ್ರತ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು, ಹೆತ್ತವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.



















ಸಂಸ್ಕೃತ ಶಿಬಿರ ಚೈತನ್ಯಮ್ ಸಮಾರೋಪ ಸಮಾರಂಭ 

ಕುಂಬಳೆ ಉಪ ಜಿಲ್ಲಾ ಮಟ್ಟದ ಒಂದು ದಿನದ ಸಹವಾಸ ಶಿಬಿರ ನಮ್ಮ ಶಾಲೆಯಲ್ಲಿ ಸಮಾರೋಪ ಸಮಾರಂಭಗೊಂಡಿತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀ ಕೈಲಾಸ ಮೂರ್ತಿಯವರು ಮುಖ್ಯ ಅತಿಥಿಯಾಗಿ ಮಕ್ಕಳಿಗೆ ಶಿಬಿರದ ಮಹತ್ವ ಹಾಗೂ ಸಂಸ್ಕ್ರತ ಭಾಷೆ ದೇವಭಾಷೆ ಈ ಭಾಷೆ ಎಲ್ಲಾ ಮಕ್ಕಳಲ್ಲಿಯೂ ಅಭಿರುಚಿಯನ್ನು ಮೂಡಿಸಲಿ ಎಂದು ಶುಭಹಾರೈಸಿದರು. ಹಾಗೆಯೇ ಶುಭಾಶಂಸನೆಗಾಗಿ ಆಗಮಿಸಿದ ಎಸ್.ವಿ.ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ.ಕೆ ವೈ ಸುಬ್ರಹ್ಮಣ್ಯ ಭಟ್ ಇವರು ಶಾಲೆಯ ಉನ್ನತಿಯ ಬಗ್ಗೆ ತಿಳಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಬಿ.ಆರ್.ಸಿ ತರಬೇತಿದಾರ ಶ್ರೀ ಲಕ್ಷ್ಮೀಪ್ರಿಯ ಸರಳಾಯರವರು ಸಂಸ್ಕ್ರತ ಭಾಷೆ ಮಕ್ಕಳ ಭವಿಷ್ಯದ ಹೆಬ್ಬಾಗಿಲು ಆಗಲಿ ಎಂದು ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ನೀಡಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ಕೈಲಾಸಮೂರ್ತಿಯವರು ಭಾಗವಹಿಸಿದ ಎಲ್ಲ ಸಂಸ್ಕ್ರತ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಸಮಾರೋಪ ಸಮಾರಂಭದ ಕೊನೆಯಲ್ಲಿ ಶ್ರೀ ವಿಘ್ನೇಶ್ವರ ಭಟ್ ಇವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಶ್ರೀ ಎಸ್.ಎನ್ ವೆಂಕಟ ವಿದ್ಯಾಸಾರರು ಎಲ್ಲರನ್ನು ಸ್ವಾಗತಿಸಿ, ಶಿಕ್ಷಕ ಶ್ರೀ ಪದ್ಮನಾಭ .ಆರ್ ಇವರು ನಿರೂಪಿಸಿದರು. ಲಘು ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.





Thursday, November 5, 2015



                   ವೃತ್ತಿ ಪರಿಚಯ ಮೇಳ

        ಅಡೂರಿನ ಜಿ.ಎಚ್.ಎಸ್ ನಲ್ಲಿ ನಡೆದ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನಾ ಹೃಷಿಕೇಶ್-ವೇಸ್ಟ್ ಮೆಟಿರಿಯಲ್, ದಯಾನಂದ-ಬೀಡ್ಸ್ ವರ್ಕ್‌ನಲ್ಲಿ ಎ ಗ್ರೇಡ್ ಪಡೆದುಕೊಂಡಿದ್ದಾರೆ.



Friday, October 30, 2015


             ಶಾಲಾ ಮಕ್ಕಳಿಗೆ ವಿಶೇಷ ಗಣಿತ ತರಬೇತಿ

ನಮ್ಮ ಶಾಲೆಯಲ್ಲಿ ಯು.ಪಿ ತರಗತಿಯ ಮಕ್ಕಳಿಗೆ ಗಣಿತ ಮೊಡೆಲ್ ತಯಾರಿಯ ಕುರಿತು ಪ್ರಾತ್ಯಕ್ಷಿಕೆ ಹಾಗೂ ಎಲ್.ಪಿ ತರಗತಿಯ ಮಕ್ಕಳಿಗೆ, ಅಕ್ಷರ ಹಾಗೂ ಸಂಖ್ಯೆಗಳನ್ನು ಉಪಯೋಗಿಸಿ ಸುಲಭ ರೀತಿಯಲ್ಲಿ ಚಿತ್ರ ರಚನೆಯ ಕುರಿತು ತರಬೇತಿಯನ್ನು ಪುತ್ತೂರಿನ ಸತ್ಯ ಮೂರ್ತಿ ಹೆಬ್ಬಾರ್‌ರವರು ನೀಡಿದರು. 







Wednesday, October 28, 2015


                         ಶಾರದಾ ಪೂಜೆ

ನಮ್ಮಶಾಲೆಯಲ್ಲಿ ನವರಾತ್ರಿ ವಿಜಯ ದಶಮಿಯ ದಿನದಂದು ಶ್ರೀ ಶಾರಾದಾ ಪೂಜೆಯ ವಿಶಿಷ್ಟವಾಗಿ ಜರಗಿತು. ನೆಲ್ಲಿಕುಂಜೆ ಶ್ರೀನಿವಾಸ ಪ್ರಸಾದರ ಪುರೋಹಿತ್ಯದಲ್ಲಿ ಪೂಜಾ ಕಾರ್ಯವು ಉತ್ತಮವಾಗಿ ನಡೆಯಿತು. ಮಕ್ಕಳೆಲ್ಲರೂ ಭಕ್ತಿ ಶ್ರಧ್ದೆಯಿಂದ ಕುಳಿತು ಭಜನೆ ಮಾಡಿದರು. ಅಧ್ಯಾಪಕರು & ರಕ್ಷಕರ ಸಹಾಯದಿಂದ ಪಂಚಕಜ್ಜಾಯ ತಯಾರಾಯಿತು. ಸಣ್ಣ ಪುಟ್ಟ ಮಕ್ಕಳು ವಿದ್ಯಾದಶಮಿಯ ಅಂಗವಾಗಿ ದೇವಿಯ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಮಾಡಿ ವಿದ್ಯಾಭ್ಯಾಸದ ಪ್ರಥಮ ಹೆಜ್ಜೆಯನ್ನಿತ್ತರು. ನೂರಾರು ಮಂದಿ ಹೆತ್ತವರು, ಮಕ್ಕಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಇವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 






                   ನಾಡ ಹಬ್ಬ ದಸರಾ ಆಚರಣೆ

ನಮ್ಮಶಾಲೆಯಲ್ಲಿ ದಸರಾ ನಾಡಹಬ್ಬವನ್ನು ಆಚರಿಸಲಾಯಿತು. ನೆರೆಯ ಸತ್ಯನಾರಾಯಣ ಹೈಸ್ಕೂಲ್ ಶಿಕ್ಷಕರಾದ ಶ್ರೀ ಉದಯಶಂಕರರವರು ದೀಪ ಜ್ವಾಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಚ್ಚೇವು ಕನ್ನಡದ ದೀಪ ನಾಡಗೀತೆ ಹಾಗೂ ವಿಶೇಷ ವಾದ್ಯ ಘೋಷವು ಉದ್ಘಾಟನೆಗೆ ವಿಶೇಷ ಮೆರುಗು ನೀಡಿತು. ಕನ್ನಡವೆಂಬ ದೀಪ ನಮ್ಮ ಬದುಕಿನ ತಮವನ್ನು ಹೋಗಲಾಡಿಸಿ, ಜೀವನ ಪ್ರಜ್ವಲಿಸುವಂತೆ ಮಾಡಿದೆ, ಮಾತ್ರವಲ್ಲದೇ ಕಾಸರಗೋಡಿನ ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಕಲಿತು, ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು, ಎಂಬ ಸಂದೇಶವನ್ನಿತ್ತರು. ಮಾತೃ ಸಂಘದ ಆಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. eನಪೀಠ ಪ್ರಶಸ್ತಿ ವಿಜೇತ ಕನ್ನಡದ ಕವಿಗಳ ವ್ಯಕ್ತಿ ಪರಿಚಯವನ್ನು ಸ್ಲೈಡ್ ಶೋ ನಲ್ಲಿ ಪ್ರದರ್ಶಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯಗೀತೆ, ನಾಡಗೀತೆ, ಜಾನಪದ ಗೀತೆ, ಹುಲಿವೇಷ ಮೊದಲಾದವುಗಳು ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕ ಪದ್ಮನಾಭ ಆರ್ ಕಾರ್ಯಕ್ರಮ ನಿರೂಪಿಸಿದರು.  







                                          




                  ವೃತ್ತಿ ಪರಿಚಯ ಮೇಳ

ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ವೃತ್ತಿ ಪರಿಚಯ ಮೇಳ ನಡೆಯಿತು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ಮಕ್ಕಳಿಗೆ ತರಬೇತಿ ನೀಡಿದರು.







        ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ನಮ್ಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಜರಗಿತು. ಗಾಂಧೀಜಿಯವರ ರಘುಪತಿ ರಾಘವ ರಾಜಾರಾಂಪ್ರಾರ್ಥನೆಯನ್ನು ಎಲ್ಲರು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅತಿಥಿಗಳಾದ ಅಬೂಬಕ್ಕರ್ ಸಿದ್ಧಿಕ್ ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ.ಕೆ ವೈ ಸುಭ್ರಹ್ಮಣ್ಯ ಭಟ್‌ರವರು ಗಾಂಧೀ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ಹಾರವನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಮುರಳೀ ಕೃಷ್ಣ ಹಾಗೂ ವೈಷ್ಣವ್ ವೈ ರವರು ಈ ಮಹಾನ್ ವ್ಯಕ್ತಿಗಳ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಉತ್ತಮ ಹೈನುಗಾರ, ಕೃಷಿಕ, ಉದ್ಯಮಿಯಾಗಿ ಸವ್ಯಸಾಚಿ ಎನಿಸಿಕೊಂಡಿರುವ ಅಬೂಬಕ್ಕರ್ ಸಿದ್ಧಿಕ್ ಪೆರ್ಲರವರು ನಮ್ಮ ಶಾಲೆಗೆ ಸಿ.ಎಫ್.ಎಲ್ ಬಲ್ಬ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ  ಅವರು ಸಿ.ಎಫ್.ಎಲ್ ಬಲ್ಬ್‌ಗಳನ್ನು ಬಳಸಿ, ವಿದ್ಯುತ್ ಉಳಿಸಿ ಎಂಬ ಸಂದೇಶವನ್ನು ನೀಡಿದರು. ಇದು ಮಕ್ಕಳ ಮೂಲಕ ಪ್ರತಿ ಮನೆಗಳಿಗೂ ತಲುಪುವಂತಾಗಲಿ ಎಂದರು. ಶಾಲಾ ವ್ಯವಸ್ಥಾಪಕರು ಅತಿಥಿಗಳಿಗೆ ಸ್ಮರಣೆಯಿತ್ತು ಗೌರವಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀ ಪ್ರಿಯ ಸರಳಾಯ, ಮಾತ್ರ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಶಿವರಾಮ್ ಭಟ್‌ರವರು ಪ್ರಾಸ್ತಾವಿಕದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಎ.ಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಗಾಂಧೀಜಿಯವರ ಕನಸಾದ ಸೇವಾದಿನದ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಲು, ಶಾಲಾ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಶಿಕ್ಷಕರ ನೇತೃತ್ವದಲ್ಲಿ ನಡೆಸಲಾಯಿತು. ಲಘು ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು.