Thursday, December 10, 2015



           ಪ್ರಾಕೃತಿಕ ಕೆರೆಗಳ ಸಂದರ್ಶನ

ನಮ್ಮ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿಗಳು ಮಲ್ಲತಡ್ಕ-ಮೂಲಸ್ಥಾನ ಸಮೀಪವಿರುವ ಹಲವು ಜೀವಿಗಳ ವಾಸಸ್ಥಾನವಾಗಿರುವ ಕೆರೆಗಳನ್ನು ಸಂದರ್ಶಿಸಿದರು. ಕಾಡು ಮರಗಳಿಂದ ಸುತ್ತುವರಿದು ನಿರಂತರ ಒರತೆಯಿಂದ ತುಂಬಿ ಹರಿಯುತ್ತಿರುವ ಹಲವು ಕೆರೆಗಳು ಈ ಪ್ರದೇಶದಲ್ಲಿದ್ದು ವಿದ್ಯಾರ್ಥಿಗಳ ವಿeನ ಕಲಿಕೆಗೆ ಪೂರಕವಾಗಿದೆ. ಜೀವ ಪರಿಸ್ಥಿತಿವ್ಯೂಹ ಗಳಂತೆ ಕಾರ್ಯವೆಸಗುವ ನೈಸರ್ಗಿಕ ಕೆರೆಗಳನ್ನು ನೋಡಿ ಸಂಭ್ರಮಿಸಿದರು. ಕಪ್ಪೆ, ಮೀನು,ಆಮೆ, ಏಡಿ,ಹಾವು ಮುಂತಾದ ಜಲಚರಗಳಲ್ಲದೇ ಪಕ್ಷಿಗಳು, ಇನ್ನಿತರ ಕೀಟಗಳಿಗೆ ಆಶ್ರಯ ತಾಣವಾಗಿದೆ ಎಂದು ಪ್ರತ್ಯಕ್ಷ ದರ್ಶನದಿಂದ ತಿಳಿದು ಕೊಂಡರು. ಪಿ.ಟಿ.ಎ ಸದಸ್ಯರಾದ ವಿಷ್ಣು ಪ್ರಸಾದ ಕೆ.ವೈ ನೇತೃತ್ವದಲ್ಲಿ ಶಿಕ್ಷಕ ಸಚ್ಚಿದಾನಂದ ಎಸ್  ಬಯಲು ಪ್ರವಾಸವನ್ನು ಆಯೋಜಿಸಿದ್ದರು. 




No comments:

Post a Comment