Thursday, December 3, 2015



                                    ಕಲೋತ್ಸವ ಪ್ರತಿಭೆ 
ಇತ್ತೀಚೆಗೆ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಒಗಟು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕು|ಪ್ರಣೀತಾ ಎಮ್.ಎಸ್, ಈಕೆ ನಮ್ಮ ಶಾಲೆಯಲ್ಲಿ ೨ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕಥೆ ಹೇಳುವ ಸ್ಪರ್ಧೆ ಹಾಗೂ ಶಾಸ್ತ್ರೀಯ ಸಂಗೀತಗಳಲ್ಲೂ ಉತ್ತಮ ಗ್ರೇಡನ್ನು ಪಡೆದಿರುವ, ಈಕೆ ಅಧ್ಯಾಪಕ ದಂಪತಿಗಳಾದ ಶ್ರೀ.ಸಚ್ಚಿದಾನಂದ ಎಸ್ ಹಾಗೂ ಶ್ರೀಮತಿ ಸರಸ್ವತಿಯವರ ಪುತ್ರಿಯಾಗಿರುತ್ತಾಳೆ. 


                                           *********


ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಬದಿಯಡ್ಕದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಯು.ಪಿ ಸಂಸ್ಕ್ರತ ವಿಭಾಗದಲ್ಲಿ ೭೮ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ನಮ್ಮ ಶಾಲೆಯ ಸಂಸ್ಕ್ರತ ವಿದ್ಯಾರ್ಥಿ, ವಿದ್ಯಾರ್ಥಿನಿಯರು.  ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಸಂಸ್ಕ್ರತ ಶಿಕ್ಷಕರಾದ ಕೆ. ಶಿವರಾಮ್ ಭಟ್ ಇವರೊಂದಿಗೆ.




                                                                 *********


ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಬದಿಯಡ್ಕದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್.ಪಿ ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ ೧೪ ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳು. ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಶಿಕ್ಷಕರಾದ ಶ್ರೀ ಸಚ್ಚಿದಾನಂದ ಎಸ್ ಇವರೊಂದಿಗೆ.




                                 ***************


No comments:

Post a Comment