ಬಯಲು ವೀಕ್ಷಣೆ
ನಮ್ಮ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿಗಳು ಪ್ರಕೃತಿ ವೀಕ್ಷಣೆಗಾಗಿ ಸಮೀಪದ ವಾಣೀನಗರ ರಕ್ಷಿತಾರಣ್ಯಕ್ಕೆ ಭೇಟಿಯಿತ್ತರು. ಅರಣ್ಯದ ಹೊರಗೆ ನಾವು ಅನುಭವಿಸುವ ಬಿಸಿ ವಾತಾವರಣ ಮತ್ತು ಕಾಡಿನೊಳಗಿರುವ ತಂಪಿನ ವಾತಾವರಣವು ವಿದ್ಯಾರ್ಥಿಗಳಿಗೆ ಖುಷಿ ತಂದಿತು, ಕಾಡಿನಲ್ಲಿ ನೆಲ್ಲಿಕಾಯಿ, ಮುಳ್ಳುಕಾಯಿಗಳನ್ನು ಸವಿಯುತ್ತಾ, ಒರತೆಯ ನೀರಿನ ತಂಪನ್ನನುಭವಿಸುತ್ತಾ ವಿವಿಧ ಪ್ರಾಣಿ ಪಕ್ಷಿಗಳ ಸ್ವಚ್ಛಂದ ಹಾರಾಟವು ಮನಸ್ಸಿಗೆ ಮುದ ನೀಡಿತು. ಇಂಗ್ಲಿಷ್ ಪಠ್ಯಕ್ಕನುಸರಿಸಿ 'ನೇಚರ್ ವಾಕ್' ಸಂಬಂಧಿಸಿ ಆಯೋಜಿಸಲಾದ ಈ ಬಯಲು ವೀಕ್ಷಣೆಗೆ ಶಿಕ್ಷಕ ಸಚ್ಚಿದಾನಂದ.ಎಸ್ ನೇತೃತ್ವ ನೀಡಿದ್ದರು. ಭವಿಷ್ಯದಲ್ಲಿ ಕಾಡನ್ನು ಉಳಿಸಿ ಬೆಳೆಸುವ ಅಗತ್ಯ ಸಂಕಲ್ಪವನ್ನು ವಿದ್ಯಾರ್ಥಿಗಳು ಮನಗಂಡರು.
No comments:
Post a Comment