Tuesday, January 27, 2015
Tuesday, January 13, 2015
152ನೇ ವಿವೇಕಾನಂದ ಜಯಂತಿ ಆಚರಣೆ ;
152 ಪ್ಲಕಾರ್ಡ್ ಗಳ ನುಡಿಮುತ್ತು
.ಶಾಲೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ ಜರಗಿತು. ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಕುಮಾರಿ ಪ್ರಣಮ್ಯಾ ಎಂ.ಎಸ್ ವಿವೇಕಾನಂದರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ನಂತರ ಮಾಸ್ಟರ್ ಸುಕೇಶ್.ಬಿ. ವಿವೇಕಾನಂದರಾಗಿ ಅಮೇರಿಕಾದ ಚಿಕಾಗೋ ಭಾಷಣವನ್ನು ಪ್ರಸ್ತುತ ಪಡಿಸಿದರು. ಸಂಸ್ಕೃತ ಶಿಕ್ಷಕ ಕೆ.ಶಿವರಾಮ್ ಭಟ್ ರವರು ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವಜನ ದಿನವನ್ನಾಗಿ ಆಚರಿಸಲಾಗುತ್ತದೆ ಹಾಗೂ ಅವರ ಆದರ್ಶಗಳೆಲ್ಲ ಇಂದಿನ ಯುವಜನತೆ ಪಾಲಿಸಲೇಬೇಕು ಎಂಬ ಸಂದೇಶವನ್ನಿತ್ತರು. 152ನೇ ವಿವೇಕಾನಂದ ಜಯಂತಿಯ ಪ್ರಯುಕ್ತ ೧೫೨ ಪ್ಲಕಾರ್ಡ್ ಗಳಲ್ಲಿ ವಿವೇಕಾನಂದರ ನುಡಿ ಮುತ್ತುಗಳನ್ನು ಬರೆದು ಪ್ರದರ್ಶಿಸಲಾಯಿತು. ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಿ ವಿವೇಕಾನಂದರ ನುಡಿಮುತ್ತುಗಳನ್ನು ಘೋಷಿಸಲಾಯಿತು.
Wednesday, January 7, 2015
ಚೆರುವತ್ತೂರು ಜಿ.ಎಫ್.ವಿ.ಎಚ್.ಎಸ್.ಎಸ್ ಕಾಡಾಂಗೋಡ್ ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದಲ್ಲಿ ಸಂಸ್ಕೃತ ಸಮಸ್ಯಾಪೂರಣಂ ಸ್ಪರ್ಧೆಯಲ್ಲಿ ಎಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಪ್ರಣಮ್ಯಾ.ಎಂ.ಎಸ್. ಈಕೆ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲಾ ೭ನೇ ತರಗತಿಯ ವಿದ್ಯಾರ್ಥಿನಿ .ಇವಳು ಶಿಕ್ಷಕ ಸಚ್ಚಿದಾನಂದ ಎಸ್ ಹಾಗೂ ಶಿಕ್ಷಕಿ ಸರಸ್ವತಿ ಕೆ.ಎನ್ ರವರ ಪುತ್ರಿ.
Subscribe to:
Posts (Atom)