ರಕ್ಷಕರ / ಪೋಷಕರ ವಿಶೇಷ ಸಮಾವೇಶ
ಮತ್ತು
ಎಲ್.ಸಿ.ಡಿ.ಪ್ರೊಜೆಕ್ಟರ್ ಹಾಗೂ ಹೊಲಿಗೆಯಂತ್ರ ಸ್ವೀಕರಣ ಸಮಾರಂಭ
ಮತ್ತು
ಎಲ್.ಸಿ.ಡಿ.ಪ್ರೊಜೆಕ್ಟರ್ ಹಾಗೂ ಹೊಲಿಗೆಯಂತ್ರ ಸ್ವೀಕರಣ ಸಮಾರಂಭ
ನಮ್ಮ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ವತಿಯಿಂದ ರಕ್ಷಕರ / ಪೋಷಕರ ವಿಶೇಷ ಸಮಾವೇಶ ಜರಗಿತು. ಮಕ್ಕಳ ಹಕ್ಕುಗಳ ಕುರಿತು ಬಿ.ಆರ್.ಸಿ. ತರಬೇತುದಾರ ಶ್ರೀ ಹರ್ಷ ಹಾಗೂ ಶಾಲಾ ಶಿಕ್ಷಕ ಸಚ್ಚಿದಾನಂದ ಎಸ್.ತರಬೇತಿ ನೀಡಿದರು. ಬಹು ಸಂಖ್ಯೆಯಲ್ಲಿ ರಕ್ಷಕರು ಈ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಮಾಣಿಮೂಲೆ ಶ್ರೀ ಮತ್ತು ಶ್ರೀಮತಿ ವೆಂಕಟ್ರಮಣ ಭಟ್ - ಮಕ್ಕಳು ನಮ್ಮ ಶಾಲೆಗೆ ಕೊಡಮಾಡಿದ ಎಲ್.ಸಿ.ಡಿ.ಪ್ರೋಜೆಕ್ಟರ್ ಹಾಗೂ ಶಾಲಾ ಮಾತೃಸಂಗಮದ ಕೊಡುಗೆ ಹೊಲಿಗೆ ಯಂತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ.ಭಟ್ ಹಾಗೂ ವ್ಯವಸ್ಥಾಪಕ ಹೃಷಿಕೇಶ.ವಿ.ಎಸ್. ಅವರು ಜಂಟಿಯಾಗಿ ಸ್ವೀಕರಿಸಿದರು.
ಸರಕಾರಿ ಪ್ರೌಢ ಶಾಲೆ ಪಡ್ರೆಯ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕರುಣಾಕರ ಅನಂತಪುರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಾರ್ಡ್ ಮೆಂಬರ್ ಶ್ರೀ ರವಿ.ಕೆ. ಹಾಗೂ ಬಿ.ಆರ್.ಸಿ. ತರಬೇತುದಾರ ಶ್ರೀ ಹರ್ಷ ಶುಭಾಶಂಸನೆ ಗೈದರು. ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ಶ್ರೀವೆಂಕಟ್ರಮಣ ಭಟ್ ಮಾಣಿಮೂಲೆ, ಶ್ರೀಮತಿ ಸೂರ್ಯಕಾಂತಿ ಮಾಣಿಮೂಲೆ, ಶ್ರೀ ಕೃಷ್ಣಪ್ರಸಾದ್, ಮಾಣಿಮೂಲೆ ಉಪಸ್ಥಿತರಿದ್ದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ. ಬಿ.ಕೆ. ಸ್ವಾಗತಿಸಿ, ಶಾಲಾ ಶಿಕ್ಷಕ ಶ್ರೀ ವೆಂಕಟ ವಿದ್ಯಾಸಾಗರ್ ವಂದಿಸಿದರು. ಶಾಲಾ ವಿದ್ಯಾರ್ಥಿ ಕುಮಾರಿ ಮಾಲವಿಕ.ಎಸ್. ಕಾರ್ಯಕ್ರಮ ನಿರೂಪಿಸಿದರು.
ದಾನಿಗಳಿಗೆ ಹಾಗೂ ಅಥಿತಿಗಳಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.