Thursday, December 22, 2011

       ನಮ್ಮ ಶಾಲೆಯಲ್ಲಿ ಇಪ್ಪತ್ತೈದು ವರ್ಷಕ್ಕೂ ಅಧಿಕ ಕಾಲ ಮಧ್ಯಾಹ್ನದ ಬಿಸಿಯೂಟ ತಯಾರಿಯ ಜವಾಬ್ದಾರಿ ಹೊತ್ತಿದ್ದ ಶ್ರೀಯುತ ಅಚ್ಚುತ ಭಟ್ ಸಜಂಗದ್ದೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ನಿಮಿತ್ತವಾಗಿ ತಾರೀಕು 30/11/2011 ರ ಬುಧವಾರ ಶಾಲಾ ಶಿಕ್ಷಕ -ರಕ್ಷಕ ಸಂಘ ಹಾಗೂ ಮಾತೃ ಸಂಗಮಗಳ ವತಿಯಿಂದ ಸಂಗ್ರಹಿಸಿದ ರೂ.20000/- ವನ್ನು ಶಾಲಾ ಮುಖ್ಯೋಪಾಧ್ಯಾಯರು ಅವರ ನಿವಾಸಕ್ಕೆ ತೆರಳಿ ಶ್ರೀಯುತರಿಗೆ ಹಸ್ತಾಂತರಿಸಿದರು. ಶಾಲಾ ಅಧ್ಯಾಪಕರು, ಸಿಬ್ಬಂದಿಯೊಂದಿಗೆ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ವಿವೇಕಾನಂದ ಬಿ.ಕೆ.ಯವರು ಜೊತೆಗಿದ್ದರು.


Thursday, December 15, 2011

      ನಮ್ಮ ಶಾಲೆಯಲ್ಲಿ ಡಿಸೆಂಬರ್ 8 ನೇ ತಾರೀಕಿನಂದು ಸಾಯಂ ಗಂಟೆ 6.30 ರಿಂದ ಕಾಸರಗೋಡಿನ ಕಿರಣ್‌ರಾಜ್ ಹಾಗೂ ರಾಜೇಶ್ (ವಿದ್ಯಾರ್ಥಿಗಳು) ರವರು ನಿರ್ದೇಶಿಸಿ ಅಭಿನಯಿಸಿದ ಕಿರುಚಿತ್ರ ಕಾವಳ ಪ್ರದರ್ಶನಗೊಂಡಿತು. ನಮ್ಮೀ ಸಂಸ್ಥೆ ಹಾಗೂ ನೆರೆಯ ಮಾತೃಭೂಮಿಸಂಘಟನೆಯವರು ಜಂಟಿಯಾಗಿದ್ದು ಕೊಂಡು ಈ ಕಾರ್ಯಕ್ರಮವನ್ನು ಏರ್ಪಾಡಿಸಲಾಯಿತು.
         ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳು, ಮೊಬೈಲ್ ಫೋನಿನ ದುರುಪಯೋಗ, ಜೀವನವನ್ನೇ ಅಂಧಕಾರ ದತ್ತ ಕೊಂಡೊಯ್ಯುವ ವೇಶ್ಯಾವಾಟಿಕೆ, ಪರಿಣಾಮವಾಗಿ ಅನುಭವಿಸ ಬೇಕಾದ ಏಡ್ಸ್ ನಂತಹ ಮಹಾಮಾರಿ ರೋಗಗಳು ವೀಕ್ಷಕರ ಹೃದಯವನ್ನು ತಟ್ಟಿದವು. ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಎಚ್ಚರಿಕೆ ನೀಡಿತು. ಬಹುಸಂಖ್ಯೆಯಲ್ಲಿ ಭಾಗವಹಿಸಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
       ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ ಭಟ್ ಚಿತ್ರದ ಬಗ್ಗೆ ಪ್ರಾಸ್ತವಿಕ ನುಡಿಗಳನ್ನಾಡಿ ಸಿನೆಮಾಕ್ಕೆ ಚಾಲನೆಯಿತ್ತರು. ನಿರ್ದೇಶಕ ಕಿರಣ್‌ರಾಜ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಮಾತೃಭೂಮಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಗ್ರಹವಾದ ರೂಪೈ 2000/- ವನ್ನು ದೇಣಿಗೆಯಾಗಿ ನೀಡಲಾಯಿತು.


    ನಮ್ಮೀ ಶಾಲೆಯ ಮಾತೃ ಸಂಗಮದ ಸದಸ್ಯೆರಾದ ಶ್ರೀಮತಿ ಅನುರೂಪಾ ಕೆದಂಬೈಮೂಲೆ ಹಾಗೂ ಶ್ರೀಮತಿ ಅರ್ಚನಾ ಪೆರಿಕ್ಕಾನ ಇವರು ಸ್ವತ: ಆಸಕ್ತಿಯಿಂದ ಏಳನೇ ತರಗತಿಯ ಮಕ್ಕಳಿಗೆ ವೃತ್ತಿ ಪರಿಚಯ ಸಮಯದಲ್ಲಿ ಹೊಲಿಗೆ ತರಗತಿಯನ್ನು ಆರಂಭಿಸಿರುತ್ತಾರೆ.ಪ್ರತಿ ಸೋಮವಾರ ಹಾಗೂ ಮಂಗಳವಾರಗಳಲ್ಲಿ ಒಂದೊಂದು ಪೀರಿಯಡ್‌ನ್ನು ಹೊಲಿಗೆ ತರಬೇತಿಗಾಗಿ ವಿನಿಯೋಗಿಸಲಾಗಿದೆ.ಆಸಕ್ತಿಯಿರುವ ಮಾತೆಯರಿಗೆ ಶನಿವಾರ ಹಾಗೂ ಆದಿತ್ಯವಾರಗಳಲ್ಲಿ ತರಗತಿ ನಡೆಸುತ್ತಿದ್ದಾರೆ.

Tuesday, December 13, 2011

ಕಳೆದ ಶೈಕ್ಷಣಿಕ ವರ್ಷವು ಜೈವ ವೈವಿಧ್ಯ ವರ್ಷವಾಗಿದ್ದು, ನಮ್ಮ ಶಾಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು.
     ಶಾಲಾ ಮಕ್ಕಳೇ ಸ್ವತಃ ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಕೈತೋಟ ನಿರ್ಮಿಸಿ ಅದರಲ್ಲಿ ವಿವಿಧ ತರದ ತರಕಾರಿ ಹಾಗೂ ಹಣ್ಣುಗಳ ಕೃಷಿಯನ್ನು ಬೆಳೆಸಲಾಗಿತ್ತು.ಸಾವಯವ ಗೊಬ್ಬರವನ್ನು ಮಾತ್ರ ಬಳಸಿಕೊಂಡು ಮಾಡಿದ ಈ ಕೃಷಿ ಮಕ್ಕಳ ಕಲಿಕೆಗೂ ಪ್ರೇರಣೆಯಾಗಿತ್ತಲ್ಲದೆ ಜೈವಿಕ ಕೃಷಿಗೂ ಮಾದರಿಯಾಗಿತ್ತು.ಕೇವಲ ಪಠ್ಯಚಟುವಟಿಕೆಗಳಲ್ಲದೆ ಪಠ್ಯೇತರ ವಿಷಯಗಳಿಗೂ ಪೂರಕವಾಗುವ ರೀತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ ಭಟ್ ಹಾಗೂ ಇನ್ನಿತರ ಸಹ ಶಿಕ್ಷಕರು ರೂಪಿಸಿದ ಈ ಯೋಜನೆ ಫಸಲು ದೊರೆಯುವಲ್ಲಿ ಸಫಲವಾಗಿದೆ.ಮಾತ್ರವಲ್ಲದೆ ಶಾಲಾ ಆವರಣದಲ್ಲಿ  ನಿರ್ಮಿಸಿದ ಕೈ ತೋಟದ ತರಕಾರಿಯ ರುಚಿ ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಕೆಯೂ ಆಗಿದೆ.


Tuesday, December 6, 2011

ನಮ್ಮಶಾಲಾ 4ನೇ ತರಗತಿಯ ವಿದ್ಯಾರ್ಥಿಗಳು ಸ್ಥಳೀಯ ಜಲಸಂಪನ್ಮೂಲ, ಪೆರಿಕ್ಕಾನದ ಬಳಿಯಿರುವ ನಿಸರ್ಗದತ್ತವಾದ ಝರಿಯನ್ನು ಸಂದರ್ಶಿಸಿದರು. ತರಗತಿಯ ಪಾಠಭಾಗದ ಅಂಗವಾಗಿ ಪ್ರವಾಸ ಕಥನ- ಬರೆಯೋಣ ಚಟುವಟಿಕೆಯ ಪೂರಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೀರಿಗಾಗಿ ಕೊರೆದ ಸುರಂಗಗಳು,ಬೆಟ್ಟ ಪ್ರದೇಶದ ಕಡಿದಾದ ದಾರಿಗಳನ್ನು ಕ್ರಮಿಸಿ, ರಾಮಪತ್ರೆ, ಸಾಗುವಾನಿ,ಮಾವು,ಹಲಸು ಮುಂತಾದ ಕಾಡುಮರಗಳನ್ನು ನೋಡಿ ಮಕ್ಕಳು ಕಥನ ರಚನೆಗೆ ವಸ್ತುವಾಗಿಸಿಕೊಂಡರು. ಶಿಕ್ಷಕರಾದ ಸಚ್ಚಿದಾನಂದ.ಎಸ್ ಮತ್ತು ಮಿಥುನ್.ವಿ.ಆರ್. ನೇತೃತ್ವ ವಹಿಸಿದರು.


Thursday, November 24, 2011



ಮಾಹಿತಿ ಹಕ್ಕು ಕಾಯಿದೆ -2005 
ವಿಶೇಷ ತಿಳುವಳಿಕಾ ಶಿಬಿರ ಮತ್ತು ಜನಪ್ರತಿನಿಧಿಗಳೊಂದಿಗೆ ಮುಕ್ತ ಸಂವಾದ.

       ನಮ್ಮೀ ಶಾಲೆಯಲ್ಲಿ ಸಾರ್ವಜನಿಕ ಅಗತ್ಯವನ್ನು ಮನಗಂಡು ಮಾಹಿತಿ ಹಕ್ಕು ಕಾಯಿದೆ ೨೦೦೫, ವಿಶೇಷ ತಿಳುವಳಿಕಾ ಶಿಬಿರವು ತಾರೀಕು ೧೬.೧೦.೨೦೧೧ನೇ ಆದಿತ್ಯವಾರ ಜರಗಿತು. ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ, ವಾರ್ಡು ಮೆಂಬರು ಶ್ರೀ ರವಿ.ಕೆ.ಯವರುಅಧ್ಯಕ್ಷ ಸ್ಥಾನವಹಿಸಿದ್ದರು.ಜಿಲ್ಲಾ ಪಂಚಾಯತು ಸದಸ್ಯ ಶ್ರೀ ಶಂಕರ ರೈ ಮಾಸ್ತರ್ ರವರು ಉದ್ಘಾಟಿಸಿದರು.
       ದಿನನಿತ್ಯ ನಡೆಯುವ ಸಾಮೂಹಿಕ ಗೊಂದಲಗಳು,ಭ್ರಷ್ಟಾಚಾರ ಸಂಬಂಧಿ ಕೆಲಸಗಳು, ಮಾಹಿತಿ ಹಕ್ಕು ಕಾಯಿದೆ ತಿಳುವಳಿಕೆಯಿಂದ, ಸಾಮೂಹಿಕ ಹೋರಾಟದ ಮೂಲಕ ತಡೆಯಲು ಸಾಧ್ಯ.ಈ ಔಚಿತ್ಯವನ್ನು ಮನಗಂಡು ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬ ಪ್ರಾಸ್ತಾವಿಕ ನುಡಿಗಳೊಂದಿಗೆ ಶಾಲ ಮುಖ್ಯೋಪಾಧ್ಯಾಯ, ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ಟರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಸಾರ್ವಜನಿಕ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಫಲಾನುಭವಿಗಳು ಅದರ ಕಡೆ ನಿಗಾ ವಹಿಸಿದಲ್ಲಿ Sಂಡಿತವಾಗಿಯೂ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು ಎಂಬ ಮಾಹಿತಿಯನ್ನು ಉದ್ಘಾಟಕ
ಶ್ರೀ ಶಂಕರ ರೈ ಮಾಸ್ತರರು ನುಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಆಯಿಷಾರವರು ಮಾಹಿತಿಹಕ್ಕು ಕಾಯಿದೆಯು ನಮಗೆ ಕೊಟ್ಟ ವಿಶೇಷ ಅವಕಾಶದ ಅಡಿಯಲ್ಲಿ ವಿವರಗಳನ್ನು ತಿಳಿದುಕೊಂಡು ಸ್ಪಂದಿಸಿದಲ್ಲಿ ನಿರೀಕ್ಷಿತ ಗುಣಮಟ್ಟದ ಕೆಲಸಕಾರ್ಯಗಳು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗೋಣ ಎಂಬ ಆಶಯ ವ್ಯಕ್ತಪಡಿಸಿದರು. ಇರ್ನ್ನೋವ ಮುಖ್ಯ ಅತಿಥಿ ಬ್ಲೋಕ್ ಪಂಚಾಯತು ಸದಸ್ಯ ಶ್ರೀ ರಾಮಕೃಷ್ಣ ರೈ ಕುದ್ವರವರು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಯ ವಿವರವನ್ನು ತಿಳಿಸಿದರು. 










 ಅಧ್ಯಕ್ಷ ಶ್ರೀ ರವಿ.ಕೆ.ಯವರು ಸಾಂದರ್ಭಿಕವಾಗಿ ಮಾತುಗಳನ್ನಾಡಿದರು.ಕುಮಾರಿ ಮಾಲವಿಕಾ ಸಜಂಗದ್ದೆ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಹಿರಿಯ ಅಧ್ಯಾಪಕ ಶ್ರೀ ಶಿವರಾಮ ಭಟ್ಟರು ನುಡಿನಮನಗಳನ್ನು ಸಲ್ಲಿಸಿದರು.
ಎರಡನೇ ಅವಧಿಯಲ್ಲಿ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮುಕ್ತ ಸಂವಾದ ನಡೆಸಲಾಯಿತು. ಇದಕ್ಕೆ ಪೂರಕವಾಗಿ ಜಿಲ್ಲಾ ಕುಟುಂಬಶ್ರೀ ಘಟಕಗಳ ಕೋರ್ಡಿನೇಟರ್ ಶ್ರೀ ಸಿ. ರಾಜಾರಾಮ್ ಅವರು ಮಾಹಿತಿ ಹಕ್ಕು ೨೦೦೫ ರ ಸವಿಸ್ತಾರ ವಿವರಗಳನ್ನು ನೀಡಿದರು. ನೋಸರ್ ಇಂಡಿಯಾ ಅಧ್ಯಕ್ಷ ಶ್ರೀ ಮ್ಯಾಥ್ಯೂ ರವರು ವಿವಿಧ ದೃಷ್ಟಾಂತಗಳೊಂದಿಗೆ ವಿಷಯವನ್ನು ಪುಷ್ಟೀಕರಿಸಿದರು.  ಜಿಲ್ಲಾ ಸಣ್ಣ ಕೈಗಾರಿಕಾ ಘಟಕದ ಕಾಂiiದರ್ಶಿ ಶ್ರೀರಾಜಾರಾಮ್ ಪೆರ್ಲ ರವರು ಮೋಡರೇಟರ್ ಆಗಿ ಸಹಕರಿಸಿದರು. ಸಾರ್ವಜನಿಕರ ಕುಂದು ಕೊರತೆ ಸಂಶಯಗಳನ್ನು ಚುನಾಯಿತ ಪ್ರತಿನಿಧಿಗಳು ನಿವಾರಿಸುವಲ್ಲಿ ಯಶಸ್ವಿಯಾದರು. ಬಹುಸಂಖ್ಯೆಯಲ್ಲಿ ಂದಿದ್ದ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಪಂಚಾಯತು ಅಧ್ಯಕ್ಷ ಶ್ರೀ ಸೋಮಶೇಖರ.ಜೆ.ಎಸ್. ಸಹಿತ ಎಲ್ಲಾ ಜನಪ್ರತಿನಿಧಿಗಳು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬದ್ಧ ಎಂಬ ಪ್ರತಿಜ್ಞೆಯನ್ನು ಕೈಗೊಂಡಿದುದು ಕಾರ್ಯಕ್ರಮದ ಒಟ್ಟು ಯಶಸ್ವಿಗೆ ಹಿಡಿದ ಕೈಗನ್ನಡಿಯಾಗಿದೆ.

Tuesday, October 11, 2011

ರಕ್ಷಕರ / ಪೋಷಕರ ವಿಶೇಷ ಸಮಾವೇಶ
ಮತ್ತು
ಎಲ್.ಸಿ.ಡಿ.ಪ್ರೊಜೆಕ್ಟರ್ ಹಾಗೂ ಹೊಲಿಗೆಯಂತ್ರ ಸ್ವೀಕರಣ ಸಮಾರಂಭ

     ನಮ್ಮ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ವತಿಯಿಂದ ರಕ್ಷಕರ / ಪೋಷಕರ ವಿಶೇಷ ಸಮಾವೇಶ ಜರಗಿತು. ಮಕ್ಕಳ ಹಕ್ಕುಗಳ ಕುರಿತು ಬಿ.ಆರ್.ಸಿ. ತರಬೇತುದಾರ ಶ್ರೀ ಹರ್ಷ ಹಾಗೂ ಶಾಲಾ ಶಿಕ್ಷಕ ಸಚ್ಚಿದಾನಂದ ಎಸ್.ತರಬೇತಿ ನೀಡಿದರು. ಬಹು ಸಂಖ್ಯೆಯಲ್ಲಿ  ರಕ್ಷಕರು ಈ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದರು.
    









ಇದೇ ಸಂದರ್ಭದಲ್ಲಿ ಮಾಣಿಮೂಲೆ ಶ್ರೀ ಮತ್ತು ಶ್ರೀಮತಿ ವೆಂಕಟ್ರಮಣ ಭಟ್ - ಮಕ್ಕಳು ನಮ್ಮ ಶಾಲೆಗೆ ಕೊಡಮಾಡಿದ ಎಲ್.ಸಿ.ಡಿ.ಪ್ರೋಜೆಕ್ಟರ್ ಹಾಗೂ ಶಾಲಾ ಮಾತೃಸಂಗಮದ ಕೊಡುಗೆ ಹೊಲಿಗೆ ಯಂತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ.ಭಟ್ ಹಾಗೂ ವ್ಯವಸ್ಥಾಪಕ ಹೃಷಿಕೇಶ.ವಿ.ಎಸ್. ಅವರು ಜಂಟಿಯಾಗಿ ಸ್ವೀಕರಿಸಿದರು.
    ಸರಕಾರಿ ಪ್ರೌಢ ಶಾಲೆ ಪಡ್ರೆಯ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕರುಣಾಕರ ಅನಂತಪುರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಾರ್ಡ್ ಮೆಂಬರ್ ಶ್ರೀ ರವಿ.ಕೆ. ಹಾಗೂ ಬಿ.ಆರ್.ಸಿ. ತರಬೇತುದಾರ ಶ್ರೀ ಹರ್ಷ ಶುಭಾಶಂಸನೆ ಗೈದರು. ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ಶ್ರೀವೆಂಕಟ್ರಮಣ ಭಟ್ ಮಾಣಿಮೂಲೆ, ಶ್ರೀಮತಿ ಸೂರ್ಯಕಾಂತಿ ಮಾಣಿಮೂಲೆ, ಶ್ರೀ ಕೃಷ್ಣಪ್ರಸಾದ್, ಮಾಣಿಮೂಲೆ ಉಪಸ್ಥಿತರಿದ್ದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ. ಬಿ.ಕೆ. ಸ್ವಾಗತಿಸಿ, ಶಾಲಾ ಶಿಕ್ಷಕ ಶ್ರೀ ವೆಂಕಟ ವಿದ್ಯಾಸಾಗರ್ ವಂದಿಸಿದರು. ಶಾಲಾ ವಿದ್ಯಾರ್ಥಿ ಕುಮಾರಿ ಮಾಲವಿಕ.ಎಸ್. ಕಾರ್ಯಕ್ರಮ ನಿರೂಪಿಸಿದರು.
  ದಾನಿಗಳಿಗೆ ಹಾಗೂ ಅಥಿತಿಗಳಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.







Thursday, October 6, 2011















                   ಮಕ್ಕಳ ಬಾನುಲಿ ಕೇಂದ್ರದ ಉದ್ಘಾಟನೆ; ಶಾಸಕರಿಗೆ ಅಭಿನಂದನೆ
   ನಮ್ಮ ಶಾಲೆಯಲ್ಲಿ ಹೊಸದಾಗಿ ವ್ಯವಸ್ಥೆಗೊಳಿಸಲಾದ ಮಕ್ಕಳ ರೇಡಿಯೋ ಕೇಂದ್ರದ ಉದ್ಘಾಟನೆ ಮತ್ತು ಶಾಸಕರಿಗೆ ಅಭಿನಂದನೆ ಆಗಸ್ಟ್ ೨೧ರಂದು ಜರಗಿತು.
    ಶಾಲಾ ಮುಖ್ಯೋಪಾಧ್ಯಾಯರು ಹಾಗೂ ವ್ಯವಸ್ಥಾಪಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ಶಾಸಕ ಪಿ.ಬಿ.ಅಬ್ದುಲ್ ರಜಾಕ್ ರೇಡಿಯೋ ಕೇಂದ್ರ ಉದ್ಘಾಟಿಸಿ ಮಾತನಾಡಿ,ಶಾಲೆಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು ಮಕ್ಕಳ ಚಟುವಟಿಕಗಳಿಗೆ ಸ್ಪೂರ್ತಿ ತುಂಬುವುದರೊಂದಿಗೆ ಬೌದ್ಧಿಕ ವಿಕಾಸಕ್ಕೆ ಕಾರಣವಾಗುತ್ತದೆ ಎಂದರು.
    ಎಣ್ಮಕಜೆ ಗ್ರಾಮ ಪಂಚಾಯತಿನ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರನ್ನು ಶಾಲಾ ಆಡಳಿತ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು. ಗ್ರಾಮ ಪಂಚಾಯತಿನ ಉಪಾಧ್ಯಾಕ್ಷೆ ಆಯಿಷಾ.ಎ.ಎ.,ಗ್ರಾಮ ಪಂಚಾಯತಿನ ಸದಸ್ಯ ರವಿ.ಕೆ.,ಉಪಜಿಲ್ಲಾ ಶಿಕ್ಷಣಾಧಿಕಾರಿ ಕರುಣಾಕರ ಆನಂತಪುರ, ಡಾ.ಮೋಹನ್ ಕುಮಾರ್ ವೈ.ಎಸ್.,ಶಾಲಾ ವ್ಯವಸ್ಥಾಪಕ ಹೃಷಿಕೇಶ, ಮಾತೃ ಸಂಗಮದ
ಅಧ್ಯಕ್ಷೆ ರಾಧಿಕಾ ಉಪಸ್ಥಿತರಿದ್ದರು.
     ಈ ಸಂದರ್ಭ ಸ್ವರ್ಗ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಮನವಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಲಾಯಿತು.ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿವೇಕಾನಂದ.ಬಿ.ಕೆ.ವಂದಿಸಿದರು.ವಿದ್ಯಾರ್ಥಿಗಳಾದ ಕುಮಾರಿ ಮೇಘಾ.ಎಸ್.ಎಮ್. ಹಾಗೂ ಮಾಸ್ಟರ್ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Tuesday, October 4, 2011









                                                     "ಮುತ್ತು ಮಾಲಾ"
    ಪರಿಶಿಷ್ಟಜಾತಿ ಹಾಗು ಪರಿಶಿಷ್ಟವರ್ಗಕ್ಕೆ ಸೇರಿದ ಮಕ್ಕಳಿಗಾಗಿ ಕಲಿಕೆ ಮತ್ತು ಗಳಿಕೆಯ ದೃಷ್ಟಿಕೋನವನ್ನಿಟ್ಟುಕೊಂಡು ಎಸ್.ಎಸ್.ಎ.ಯ ವತಿಯಿಂದ ನಡೆಸಲ್ಪಟ್ಟ ಮುತ್ತು ಮಾಲಾ ಎಂಬ ಎರಡು ದಿನದ ವಿಶೇಷ ಕಾರ್ಯಾಗಾರ ಮಾರ್ಚ್ ತಿಂಗಳ ೧೯,೨೦ ರಂದು ಜರಗಿತು.ಪಂಚಾಯತು ವ್ಯಾಪ್ತಿಗೆ ಸೇರಿದ ವಿವಿಧ ಶಾಲೆಗಳಿಂದ ಒಟ್ಟು ೭೦ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಳೆ ಬಿ.ಆರ್.ಸಿ. ಪ್ರೋಗ್ರಾಂ ಆಫೀಸರ್ ಶ್ರೀ ರವೀಂದ್ರ ಮಾಸ್ಟರ್ ನೆರವೇರಿಸಿದರು.ಮಕ್ಕಳನ್ನು ಗುಂಪುಗಳಾಗಿ ಮಾಡಿ ಪ್ರತಿ ಗುಂಪಿಗೂ ಎಲ್ಲಾ ನಿರ್ಮಾಣ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಸೆಶನ್‌ಗಳಲ್ಲಿ ತರಬೇತಿ ನೀಡಲಾಯಿತು.
    ಪ್ರತಿಯೊಂದು ನಿರ್ಮಾಣ ಚಟುವಟಿಕೆಯ ಹಂತದಲ್ಲೂ ಉತ್ಪನ್ನದ ಉಪಯೋಗ,ಬಳಸಿದ ಸಾಮಾಗಿ, ತಯಾರಿಸುವ ವಿಧಾನಗಳ ಕುರಿತು ಚರ್ಚಿಸಲಾಯಿತು.ಉತ್ಪನ್ನದ ತಯಾರಿಯ ಬಳಿಕ ಉತ್ಪನ್ನದ ಖರ್ಚುವೆಚ್ಚ, ಜಾಹೀರಾತು ಬರಹ,ಮಾರಾಟದ ಕುರಿತು ಚರ್ಚಿಸಿ ಬೆಲೆ ನಿರ್ಧರಿಸುವುದರ ಮೂಲಕ ಗಣಿತದ ಆಶಯವನ್ನು ಪ್ರಸ್ತುತಪಡಿಸಲಾಯಿತು.
ಎರಡು ದಿನದ ನಿರ್ಮಾಣ ಚಟುವಟಿಕೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಪೂರ್ಣಿಮ ಕೊಡುಮಾಡು, ಶ್ರೀಮತಿ ಅರ್ಚನಾ, ಕುಮಾರಿ ಮೋಹಿನಿ, ನೋಸರ್ ಇಂಡಿಯಾ ಸಂಘದ ಸದಸ್ಯೆ ಫೌಸಿಯಾ ಮತ್ತು ಬಳಗದವರು ಸಹಕರಿಸಿದರು.
    ಶಿಬಿರದ ಕೊನೆಯಲ್ಲಿಸಮಾರೋಪ ಸಮಾರಂಭ ಹಾಗು ಮಾರಾಟ ಮೇಳ ಜರಗಿತು.ಮಕ್ಕಳ ಉತ್ಪನ್ನವಾದ ಫಿನೋಯಿಲ್, ಸಾಬೂನು, ಮುತ್ತಿನಹಾರಗಳು ಗ್ರಾಹಕರ ಮನ ಸೆಳೆದು ಬಿರುಸಿನ ವ್ಯಾಪಾರ ನಡೆಯಿತು.