Tuesday, December 6, 2011

ನಮ್ಮಶಾಲಾ 4ನೇ ತರಗತಿಯ ವಿದ್ಯಾರ್ಥಿಗಳು ಸ್ಥಳೀಯ ಜಲಸಂಪನ್ಮೂಲ, ಪೆರಿಕ್ಕಾನದ ಬಳಿಯಿರುವ ನಿಸರ್ಗದತ್ತವಾದ ಝರಿಯನ್ನು ಸಂದರ್ಶಿಸಿದರು. ತರಗತಿಯ ಪಾಠಭಾಗದ ಅಂಗವಾಗಿ ಪ್ರವಾಸ ಕಥನ- ಬರೆಯೋಣ ಚಟುವಟಿಕೆಯ ಪೂರಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೀರಿಗಾಗಿ ಕೊರೆದ ಸುರಂಗಗಳು,ಬೆಟ್ಟ ಪ್ರದೇಶದ ಕಡಿದಾದ ದಾರಿಗಳನ್ನು ಕ್ರಮಿಸಿ, ರಾಮಪತ್ರೆ, ಸಾಗುವಾನಿ,ಮಾವು,ಹಲಸು ಮುಂತಾದ ಕಾಡುಮರಗಳನ್ನು ನೋಡಿ ಮಕ್ಕಳು ಕಥನ ರಚನೆಗೆ ವಸ್ತುವಾಗಿಸಿಕೊಂಡರು. ಶಿಕ್ಷಕರಾದ ಸಚ್ಚಿದಾನಂದ.ಎಸ್ ಮತ್ತು ಮಿಥುನ್.ವಿ.ಆರ್. ನೇತೃತ್ವ ವಹಿಸಿದರು.


No comments:

Post a Comment