Tuesday, December 13, 2011

ಕಳೆದ ಶೈಕ್ಷಣಿಕ ವರ್ಷವು ಜೈವ ವೈವಿಧ್ಯ ವರ್ಷವಾಗಿದ್ದು, ನಮ್ಮ ಶಾಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು.
     ಶಾಲಾ ಮಕ್ಕಳೇ ಸ್ವತಃ ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಕೈತೋಟ ನಿರ್ಮಿಸಿ ಅದರಲ್ಲಿ ವಿವಿಧ ತರದ ತರಕಾರಿ ಹಾಗೂ ಹಣ್ಣುಗಳ ಕೃಷಿಯನ್ನು ಬೆಳೆಸಲಾಗಿತ್ತು.ಸಾವಯವ ಗೊಬ್ಬರವನ್ನು ಮಾತ್ರ ಬಳಸಿಕೊಂಡು ಮಾಡಿದ ಈ ಕೃಷಿ ಮಕ್ಕಳ ಕಲಿಕೆಗೂ ಪ್ರೇರಣೆಯಾಗಿತ್ತಲ್ಲದೆ ಜೈವಿಕ ಕೃಷಿಗೂ ಮಾದರಿಯಾಗಿತ್ತು.ಕೇವಲ ಪಠ್ಯಚಟುವಟಿಕೆಗಳಲ್ಲದೆ ಪಠ್ಯೇತರ ವಿಷಯಗಳಿಗೂ ಪೂರಕವಾಗುವ ರೀತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕೆ.ವೈ.ಸುಬ್ರಹ್ಮಣ್ಯ ಭಟ್ ಹಾಗೂ ಇನ್ನಿತರ ಸಹ ಶಿಕ್ಷಕರು ರೂಪಿಸಿದ ಈ ಯೋಜನೆ ಫಸಲು ದೊರೆಯುವಲ್ಲಿ ಸಫಲವಾಗಿದೆ.ಮಾತ್ರವಲ್ಲದೆ ಶಾಲಾ ಆವರಣದಲ್ಲಿ  ನಿರ್ಮಿಸಿದ ಕೈ ತೋಟದ ತರಕಾರಿಯ ರುಚಿ ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಕೆಯೂ ಆಗಿದೆ.


No comments:

Post a Comment