ಶಾಲಾ ವಾರ್ಷಿಕೋತ್ಸವ ಬೆಳಗ್ಗೆ ಗಂಟೆ 9.30 ಕ್ಕೆ ಸರಿಯಾಗಿ ಶ್ರೀಯುತ ಅರವಿಂದ ಕುಮಾರ್ , ಸೀನಿಯರ್ ಸುಪರಿಂಟೆಂಡೆಂಟ್ ಎ.ಇ.ಒ.ಆಫೀಸ್,ಕುಂಬಳೆ ರವರು ಧ್ವಜಾರೋಹಣ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು .ಶಾಲಾ ವ್ಯವಸ್ಥಾಪಕರು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಯುತ ವಿವೇಕಾನಂದ ಬಿ.ಕೆ. ಹಾಗೂ ಅನೇಕ ಮಂದಿ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾದರು. ಸಿಹಿತಿಂಡಿ ವಿತರಣೆಯ ಬಳಿಕ ಎಲ್.ಪಿ., ಯು.ಪಿ. ಹಾಗೂ ಅಂಗನವಾಡಿ ಮಕ್ಕಳಿಂದ ಛದ್ಮವೇಷ ಸ್ಪರ್ಧೆ ಜರಗಿತು.
ಅಪರಾಹ್ಣ ಗಂಟೆ ೩.೩೦ ರಿಂದ ಶಾಲಾ ಹಳೆವಿದ್ಯಾರ್ಥಿ ಮೋಹನ ಆಚಾರ್ಯ ಎಸ್.ಕೆ.ಯವರಿಂದ ಟೆಲಿಫಿಲಂ ಪ್ರದರ್ಶನಗೊಂಡಿತು.ಶಾಲಾ ಸಂಗೀತ ವಿದ್ಯಾರ್ಥಿಗಳಿಂದ 15 ನಿಮಿಷದ ಕಾರ್ಯಕ್ರಮದ ಬಳಿಕ 4.30 ರಿಂದ ಸಭಾ ಕಾರ್ಯಕ್ರಮ ಜರಗಿತು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕರುಣಾಕರ ಅನಂತಪುರ ಅವರ ಅಧ್ಯಕ್ಷತೆಯಲ್ಲಿ, ನೆರೆಯ ವಾಣೀನಗರ ಶಾಲೆಯ ಪ್ರಾಂಶುಪಾಲ ಶ್ರೀ ನಾರಾಯಣ ರಾವ್ ರವರು ಪ್ರಧಾನ ಅಭ್ಯಾಗತರಾಗಿ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ನಮ್ಮೀ ಶಾಲೆಯ ಹಿರಿಯ ವಿದ್ಯಾರ್ಥಿ ಸಾಧಕರಾದ ಶ್ರೀ ಶ್ರೀಧರ ಪಡ್ರೆ (ಯಕ್ಷಗಾನ ಚೆಂಡೆ ಮದ್ದಳೆವಾದಕ), ಶ್ರೀ ಪ್ರವೀಣ್ ಪಿ.ಬಿ.(ಟೆಕ್ನಿಕಲ್ ಅಸಿಸ್ಟಂಟ್), ಶ್ರೀ ಮೋಹನ ಪಡ್ರೆ (ಚಿತ್ರಕಾರ,ಟೆಲಿಫಿಲಂ ನಿರ್ದೇಶಕ) ಶ್ರೀ ಪ್ರಶಾಂತ ಆಚಾರ್ಯ (ಶಿಲ್ಪಿ ಕಾರ್ಕಳ), ಕುಮಾರಿ ಐಶ್ವರ್ಯಾ ಎಸ್.ಕೆ. (ರಿಸರ್ಚ್ ಎಸೋಸಿಯೇಟ್, ಎಪೊಟೆಕ್ಸ್, ಬೆಂಗಳೂರು) ಯವರನ್ನು ಅಭಿನಂದಿಸಲಾಯಿತು.
ಇನ್ನೋರ್ವ ಅತಿಥಿಗಳಾದ ಶ್ರೀ ಬಾಳಿಕೆ ಗಣಪತಿ ಭಟ್ (ಮೇನೇಜರ್, ಇನ್ಫೋಸಿಸ್ ಮಂಗಳೂರು ) ಇವರಿಂದ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದರು ಧನ್ಯವಾದವಿತ್ತರು.
ವಿದ್ಯಾರ್ಥಿನಿಯರಾದ ಕುಮಾರಿ ಶ್ರುತಿ.ಕೆ. ಹಾಗೂ ಕುಮಾರಿ ಚೈತ್ರಾ.ಕೆ.ಯವರು ಕಾರ್ಯಕ್ರಮ ನಿರೂಪಿಸಿದರು.
ಉಪಾಹಾರದ ಬಳಿಕ ರಾತ್ರಿ ಗಂಟೆ 8.00ರಿಂದ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ - ನಾಟಕಗಳು ಪ್ರದರ್ಶನಗೊಂಡವು. ಈ ಸಂದರ್ಭದಲ್ಲಿ ನಾಟ್ಯ ಗುರು ಶ್ರೀ ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕಲಾ ಉಚಿತ ತರಬೇತಿ ಕೇಂದ್ರ ಇದರ ಎಳೆಯ ಕಲಾವಿದರಿಂದ ವೀರ ಬಬ್ರುವಾಹನಯಕ್ಷಗಾನ ಬಯಲಾಟ ನಡೆಯಿತು.
ಅಪರಾಹ್ಣ ಗಂಟೆ ೩.೩೦ ರಿಂದ ಶಾಲಾ ಹಳೆವಿದ್ಯಾರ್ಥಿ ಮೋಹನ ಆಚಾರ್ಯ ಎಸ್.ಕೆ.ಯವರಿಂದ ಟೆಲಿಫಿಲಂ ಪ್ರದರ್ಶನಗೊಂಡಿತು.ಶಾಲಾ ಸಂಗೀತ ವಿದ್ಯಾರ್ಥಿಗಳಿಂದ 15 ನಿಮಿಷದ ಕಾರ್ಯಕ್ರಮದ ಬಳಿಕ 4.30 ರಿಂದ ಸಭಾ ಕಾರ್ಯಕ್ರಮ ಜರಗಿತು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕರುಣಾಕರ ಅನಂತಪುರ ಅವರ ಅಧ್ಯಕ್ಷತೆಯಲ್ಲಿ, ನೆರೆಯ ವಾಣೀನಗರ ಶಾಲೆಯ ಪ್ರಾಂಶುಪಾಲ ಶ್ರೀ ನಾರಾಯಣ ರಾವ್ ರವರು ಪ್ರಧಾನ ಅಭ್ಯಾಗತರಾಗಿ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ನಮ್ಮೀ ಶಾಲೆಯ ಹಿರಿಯ ವಿದ್ಯಾರ್ಥಿ ಸಾಧಕರಾದ ಶ್ರೀ ಶ್ರೀಧರ ಪಡ್ರೆ (ಯಕ್ಷಗಾನ ಚೆಂಡೆ ಮದ್ದಳೆವಾದಕ), ಶ್ರೀ ಪ್ರವೀಣ್ ಪಿ.ಬಿ.(ಟೆಕ್ನಿಕಲ್ ಅಸಿಸ್ಟಂಟ್), ಶ್ರೀ ಮೋಹನ ಪಡ್ರೆ (ಚಿತ್ರಕಾರ,ಟೆಲಿಫಿಲಂ ನಿರ್ದೇಶಕ) ಶ್ರೀ ಪ್ರಶಾಂತ ಆಚಾರ್ಯ (ಶಿಲ್ಪಿ ಕಾರ್ಕಳ), ಕುಮಾರಿ ಐಶ್ವರ್ಯಾ ಎಸ್.ಕೆ. (ರಿಸರ್ಚ್ ಎಸೋಸಿಯೇಟ್, ಎಪೊಟೆಕ್ಸ್, ಬೆಂಗಳೂರು) ಯವರನ್ನು ಅಭಿನಂದಿಸಲಾಯಿತು.
ಇನ್ನೋರ್ವ ಅತಿಥಿಗಳಾದ ಶ್ರೀ ಬಾಳಿಕೆ ಗಣಪತಿ ಭಟ್ (ಮೇನೇಜರ್, ಇನ್ಫೋಸಿಸ್ ಮಂಗಳೂರು ) ಇವರಿಂದ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದರು ಧನ್ಯವಾದವಿತ್ತರು.
ವಿದ್ಯಾರ್ಥಿನಿಯರಾದ ಕುಮಾರಿ ಶ್ರುತಿ.ಕೆ. ಹಾಗೂ ಕುಮಾರಿ ಚೈತ್ರಾ.ಕೆ.ಯವರು ಕಾರ್ಯಕ್ರಮ ನಿರೂಪಿಸಿದರು.
ಉಪಾಹಾರದ ಬಳಿಕ ರಾತ್ರಿ ಗಂಟೆ 8.00ರಿಂದ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ - ನಾಟಕಗಳು ಪ್ರದರ್ಶನಗೊಂಡವು. ಈ ಸಂದರ್ಭದಲ್ಲಿ ನಾಟ್ಯ ಗುರು ಶ್ರೀ ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕಲಾ ಉಚಿತ ತರಬೇತಿ ಕೇಂದ್ರ ಇದರ ಎಳೆಯ ಕಲಾವಿದರಿಂದ ವೀರ ಬಬ್ರುವಾಹನಯಕ್ಷಗಾನ ಬಯಲಾಟ ನಡೆಯಿತು.