Wednesday, March 28, 2012




                                       ಕೃಷಿ ಮಾಹಿತಿ ವಿಶೇಷ ಶಿಬಿರ
              ರಕ್ಷಕ - ಶಿಕ್ಷಕ ಸಂಘ, ಮಾತೃ ಸಂಗಮ ಹಾಗೂ ಕಾಸರಗೋಡು ಸಿಪಿಸಿಆರ್‌ಐ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ  ನಮ್ಮ ಶಾಲಾ ಮಕ್ಕಳಿಗೆ ಹಾಗೂ ಆಸಕ್ತ ಕೃಷಿಕರಿಗೆ ಒಂದು ದಿನದ ಕೃಷಿ ಮಾಹಿತಿ ವಿಶೇಷ ಶಿಬಿರ ಜರಗಿತು.
         

         ಕಾರ್ಯಕ್ರಮವನ್ನು ಖ್ಯಾತ ಪರಿಸರವಾದಿ ಹಾಗೂ ಜಲತಜ್ಞ ಶ್ರೀ ಪಡ್ರೆ ಯವರು ಶಾಲಾ ವಠಾರದಲ್ಲಿ ಬೀಜ ಬಿತ್ತುವ ಮೂಲಕ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ರವಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಪಂಚಾಯಿತಿ ಕೃಷಿ ಭವನ ಅಧಿಕಾರಿ ಮೀರಾ.ಎಸ್.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಮನ್ವಯಾಧಿಕಾರಿ ಡಾ.ಮನೋಜ್ ಕುಮಾರ್, ಕೃಷಿ ವಿಷಯ ತಜ್ಞರಾದ ಡಾ.ಎಸ್.ಲೀನಾ, ಶೋಭ.ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಕಾರಿ ಕೃಷಿಯ ಬಗ್ಗೆ ಮಾಹಿತಿ ನೀಡಿರರು.
     

        ಈ ಸಂದರ್ಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಕೊಡುಗೆಯಾಗಿ ನೀಡಿದ ಸ್ಪ್ರೇಯರ್‌ನ್ನು ಕೃಷಿ ಅಧಿಕಾರಿ ಮೀರಾರವರು ಶಾಲೆಯ ಇಕೋ ಕ್ಲಬ್ ಸದಸ್ಯ ಪ್ರಸನ್ನ ಕುಮಾರ್.ಬಿ ಅವರಿಗೆ ಹಸ್ತಾಂತರಿಸಿದರು.ಶಾಲಾ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಮಾಳವಿಕಾ.ಎಸ್. ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಎಸ್.ಎನ್.ವೆಂಕಟ ವಿದ್ಯಾಸಾಗರರು ವಂದಿಸಿದರು.



No comments:

Post a Comment