Tuesday, March 27, 2012

                     ಸಹವಾಸ ಶಿಬಿರ ಡಿಸೆಂಬರ್.23 & 24


                               
         ಡಯಟ್ ಮಾಯಿಪ್ಪಾಡಿಯ ಅಧ್ಯಾಪಕ ವಿದ್ಯಾರ್ಥಿಗಳು 4 ನೇ ತರಗತಿಯ ಮಕ್ಕಳಿಗೆ ವಿಶೇಷವಾಗಿ ಆಯೋಜಿಸಿದ ಎರಡು ದಿನಗಳ ಸಹವಾಸ ಶಿಬಿರವು ಡಿಸೆಂಬರ್ ತಿಂಗಳ 23 ಮತ್ತು 24ನೇ ತಾರೀಕಿನಂದು ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ ಜರಗಿತು.ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆಯವರ ಅಧ್ಯಕ್ಷತೆಯಲ್ಲಿ ಸಮಾರಂಭವನ್ನು ವಾರ್ಡ್ ಸದಸ್ಯ ಶ್ರೀ ರವಿ.ಕೆ ಯವರು ನವೀನ ರೀತಿಯಲ್ಲಿ ಉದ್ಘಾಟಿಸಿದರು.
           ಹಲವು ತರದ ಆಟಗಳು, ಹಾಡು-ಕುಣಿತ, ಪ್ರಯೋಗ, ಗಣಿತ,ಪರಿಸರ, ಭಾಷೆ, ಸಿ.ಡಿ. ಪ್ರದರ್ಶನ. ಶಿಬಿರಾಗ್ನಿಯೇ ಮುಂತಾದ ಹಲವು ಚಟುವಟಿಕೆಗಳಲ್ಲಿ ಅಧ್ಯಾಪಕ ವಿದ್ಯಾರ್ಥಿಗಳ ಜತೆಯಲ್ಲಿ ಶಿಬಿರಾರ್ಥಿಗಳು ಬಹಳ ಸಂತೋಷದಿಂದ ಭಾಗವಹಿಸಿದರು. ಡಯಟ್ ಮಯಿಪ್ಪಾಡಿಯ ಉಪನ್ಯಾಸಕರಾದ ಶ್ರೀಯುತ ಶಶಿಧರ ಸರ್‌ರವರು ಎರಡು ದಿನವೂ ನಮ್ಮೊಂದಿಗಿದ್ದು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಅಧ್ಯಾಪಕ ವಿದ್ಯಾರ್ಥಿಗಳನ್ನು ತೆರೆಮರೆಯಿಂದ ವೀಕ್ಷಿಸುತ್ತಿದ್ದರು. ಶಿಬಿರಾರ್ಥಿಗಳು,ಅಧ್ಯಾಪಕರು, ಅಧ್ಯಾಪಕ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು ತಮ್ಮ ಅನುಭವಗಳನ್ನು ಹೇಳುವುದರೊಂದಿಗೆ ಶಿಬಿರ ಸಮಾಪನಗೊಂಡಿತು.

                                                             


No comments:

Post a Comment