Wednesday, October 28, 2015

                   ನಾಡ ಹಬ್ಬ ದಸರಾ ಆಚರಣೆ

ನಮ್ಮಶಾಲೆಯಲ್ಲಿ ದಸರಾ ನಾಡಹಬ್ಬವನ್ನು ಆಚರಿಸಲಾಯಿತು. ನೆರೆಯ ಸತ್ಯನಾರಾಯಣ ಹೈಸ್ಕೂಲ್ ಶಿಕ್ಷಕರಾದ ಶ್ರೀ ಉದಯಶಂಕರರವರು ದೀಪ ಜ್ವಾಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಚ್ಚೇವು ಕನ್ನಡದ ದೀಪ ನಾಡಗೀತೆ ಹಾಗೂ ವಿಶೇಷ ವಾದ್ಯ ಘೋಷವು ಉದ್ಘಾಟನೆಗೆ ವಿಶೇಷ ಮೆರುಗು ನೀಡಿತು. ಕನ್ನಡವೆಂಬ ದೀಪ ನಮ್ಮ ಬದುಕಿನ ತಮವನ್ನು ಹೋಗಲಾಡಿಸಿ, ಜೀವನ ಪ್ರಜ್ವಲಿಸುವಂತೆ ಮಾಡಿದೆ, ಮಾತ್ರವಲ್ಲದೇ ಕಾಸರಗೋಡಿನ ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಕಲಿತು, ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು, ಎಂಬ ಸಂದೇಶವನ್ನಿತ್ತರು. ಮಾತೃ ಸಂಘದ ಆಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. eನಪೀಠ ಪ್ರಶಸ್ತಿ ವಿಜೇತ ಕನ್ನಡದ ಕವಿಗಳ ವ್ಯಕ್ತಿ ಪರಿಚಯವನ್ನು ಸ್ಲೈಡ್ ಶೋ ನಲ್ಲಿ ಪ್ರದರ್ಶಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯಗೀತೆ, ನಾಡಗೀತೆ, ಜಾನಪದ ಗೀತೆ, ಹುಲಿವೇಷ ಮೊದಲಾದವುಗಳು ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕ ಪದ್ಮನಾಭ ಆರ್ ಕಾರ್ಯಕ್ರಮ ನಿರೂಪಿಸಿದರು.  







                                          



No comments:

Post a Comment