Thursday, October 2, 2014


ಗಾಂಧೀ , ಶಾಸ್ತ್ರಿ ಜನ್ಮ ದಿನಾಚರಣೆ  

 ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯ ಅಂಗವಾಗಿ ಈ ಇಬ್ಬರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಶಾಲಾ ವಿದ್ಯಾರ್ಥಿ ನಾಯಕ ಸುಕೇಶ್ ಹಾಗೂ ಸಾಂಸ್ಕೃತಿಕ ಮಂತ್ರಿ ಮಧುರಾ.ವೈ ಹೂವಿನ ಹಾರವನ್ನು ಸಮರ್ಪಿಸಿದರು. ನಂತರ ಸುಕೇಶ್ ಹಾಗೂ ಪ್ರಣಮ್ಯಾರವರು ಶಾಸ್ತ್ರಿ ಹಾಗೂ ಗಾಂಧೀಜಿಯವರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಗಾಂಧೀಜಿಯವರ ಪ್ರಾರ್ಥನಾ ಗೀತೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಮಕ್ಕಳಿಗೆ ಹಾಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ರವರು ಗಾಂಧೀ ಕನಸಾದ ಶುಚಿತ್ವ ಯಜ್ಞಕ್ಕೆ ಚಾಲನೆಯಿತ್ತರು. ಸಹ ಶಿಕ್ಷಕರು ಉಪಸ್ಥಿತರಿದ್ದರು. ಬಳಿಕ ಶಾಲಾ ವಠಾರದ ಸುತ್ತು ಮುತ್ತಲಿನ ಪರಿಸರವನ್ನು ಮಕ್ಕಳು ಶಿಕ್ಷಕರು ಸೇರಿ ಶುಚಿಗೊಳಿಸಿದರು.

 



No comments:

Post a Comment