Wednesday, August 31, 2016




                        ವಾಚನಾ ಸಪ್ತಾಹದ ಸಮಾರೋಪ ಸಮಾರಂಭ

ನಮ್ಮಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಸಂಸ್ಮರಣಾ ದಿನದ ಅಂಗವಾಗಿ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಜರಗಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ, ಇಂಜಿನಿಯರಿಂಗ್ ಪದವಿದರರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಶ್ರೀ  ಶ್ರೀ  ಹರಿ ಭರಣೀಕರ್ ರವರು 'ಓದುವಾಗ ಖುಷಿಯಿಂದ  ಇಷ್ಟಪಟ್ಟು ಓದಬೇಕು. ಶಾಲಾ ಗ್ರಂಥಾಲಯದಲ್ಲಿ ಮಕ್ಕಳಿಗಾಗಿ ಇರುವ ಪುಸ್ತಕವನ್ನು ಓದಿ ಮುಗಿಸುತ್ತೇನೆ ಎಂಬ ಧ್ಯೇಯವನ್ನು ಶಪಥ ಮಾಡಿಕೊಳ್ಳಿ ಜೀವನದ ಗುರಿಯನ್ನು ಇಟ್ಟುಕೊಳ್ಳಿ, ಆ ಗುರಿಯ ಹಿಂದೆ ಗುರುಬೇಕು. ಓದು ವಾಚನಾ ಸಪ್ತಾಹಕ್ಕೆ ಸೀಮಿತವಾಗಿರದೆ ನಿರಂತರವಾಗಿರಬೇಕು. ಎಲ್ಲವನ್ನು ಸಾಧಿಸಲು ಸಕಲ ಸೌಕರ್ಯವು ನಿಮಗೆ ಇಲ್ಲಿ ಲಭಿಸುತ್ತದೆ' ಎಂದು ಈ ಸಂದರ್ಭದಲ್ಲಿ ನುಡಿದರು. ಪ್ರತಿ ತರಗತಿಂದಲೂ ಇಬ್ಬರೂ ಮಕ್ಕಳಿಂದ ಓದು ಟಿಪ್ಪಣಿ ಮಂಡಿಸಲಾತು. ಮಕ್ಕಳು ತಯಾರಿಸಿದ ಸಂಚಿಕೆಯನ್ನು ಈ ಸಂದರ್ಭಲ್ಲಿ ಬಿಡುಗಡೆ ಮಾಡಲಾತು. 
ಪ್ರಾಸ್ತಾವಿಕದೊಂದಿಗೆ ಶಿಕ್ಷಕ ವೆಂಕಟ ವಿದ್ಯಾಸಾಗರ್ ರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ವಂದನಾರ್ಪಣೆ ಗೈದರು.
ವಿದ್ಯಾರ್ಥಿನಿಯರಾದ ಕುಮಾರಿ ಸಂಜನಾ ಹೃಷಿಕೇಶ್ ಹಾಗೂ ಶೈಲಿ.ಕೆ ಕಾರ್ಯಕ್ರಮ ನಿರೂಪಿಸಿದರು.
















No comments:

Post a Comment