Wednesday, August 31, 2016


                                                     
                                                            ವೈದ್ಯರ ದಿನ 


ಖ್ಯಾತ ವೈದ್ಯ ಮತ್ತು ಅಪ್ರತಿಮ ದೇಶ ಭಕ್ತ ಡಾ ಬಿ.ಸಿ.ರಾಯ್ ಅವರ ಜನ್ಮ ದಿನದ ಸ್ಮರಣೆಯೊಂದಿಗೆ ಅಖಂಡ ವೈದ್ಯ ಲೋಕಕ್ಕೆ ಕೃತಜ್ಞತೆ ಹೇಳುವ ಅಪೂರ್ವ ಕ್ಷಣ. ಬದುಕಿನಲ್ಲಿ ಆರೋಗ್ಯವೇ ಮೂಲ ಮಂತ್ರ. ಪ್ರಸ್ತುತ ಪ್ರಪಂಚದಲ್ಲಿನ ಸ್ಪರ್ಧಾತ್ಮಕ ಬದುಕಿನಲ್ಲಿ ಆರೋಗ್ಯದ ಬಗೆಗಿನ ಕಾಲಜಿ ಕಡಿಮೆಯಾಗಿ ಆರೋಗ್ಯ ಹದಗೆಡುವ ಪ್ರಸಂಗಗಳು ಜಾಸ್ತಿ. ಆ ಕ್ಷಣಕ್ಕೆ ನಮ್ಮ ಜೀವಕ್ಕೆ ಮರುಜೀವ ಕರುಣಿಸುವ ದೇವರು ವೈದ್ಯರು. ವೈದ್ಯರ ಸೇವೆ ಅಪಾರ. ವೈದ್ಯರ ದಿನದಂದು ನಮ್ಮ ಶಾಲೆಯಲ್ಲಿ ವಿಜ್ಞಾನ ಕ್ಲಬಿನ ಸದಸ್ಯರು ಹಾಗೂ ಕ್ಲಬಿನ ಸಂಚಾಲಕ ಶಿಕ್ಷಕರಾದ ಶ್ರೀ ವೆಂಕಟ ವಿದ್ಯಾಸಾಗರ್ ರವರು ಸ್ಥಳೀಯ ವೈದ್ಯರು ಹಾಗೂ ಕೇರಳ ರಾಜ್ಯ ಕೈರಾಲಿ 'ಡಾಕ್ಟರ್ ಎವಾರ್ಡ್' ಪುರಸ್ಕೃತ ಮೋಹನ್ ಕುಮಾರ್ ವೈ.ಎಸ್ ಇವರ ಕ್ಲಿನಿಕ್‌ಗೆ ತೆರಳಿ ಪುಷ್ಪ ಗುಚ್ಛ ನೀಡಿ ಶುಭಾಶಯ ಕೋರಲಾತು.






No comments:

Post a Comment