ಹಲಸು ದಾಸ್ತಾನು ಕಾರ್ಯಾಗಾರ
ವಿಪರೀತ ಮಳೆ, ಹವಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದಾಗಿ ಮಳೆಗಾಲ ಬಂತೆಂದರೆ ತರಕಾರಿ ಬೆಲೆ ಗಗನಕ್ಕೇರುವುದು ಸರ್ವೇ ಸಾಮಾನ್ಯ ಸಂಗತಿ, ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಹಲಸಿನ ಸೋಳೆ ದಾಸ್ತಾನು ಕಾರ್ಯಾಗಾರ ಜರಗಿತು. ಶಾಲಾ ಪರಿಸರದಲ್ಲಿ ಬೆಳೆದ ತಾಜಾ, ವಿಷಮುಕ್ತ ಆಹಾರ ಬೆಳೆ ಹಲಸು ಮಕ್ಕಳ ಮಧ್ಯಾಹ್ನದೂಟಕ್ಕೆ ಪ್ರಯೋಜನಕಾರಿಯಾಗಲೆಂದು ಉಪ್ಪಿನಲ್ಲಿ ದಾಸ್ತಾನು ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸಹಿತ ಶಿಕ್ಷಕರು ಹಾಗೂ ರಕ್ಷಕರು ಸೇರಿಕೊಂಡು ಸುಮಾರು ೩೦ ಹಲಸಿನ ಕಾಯಿಯನ್ನು ಉಪ್ಪಿನಲ್ಲಿ ದಾಸ್ತಾನು ಮಾಡಲಾಯಿತು.
No comments:
Post a Comment