Wednesday, September 7, 2016


                                         ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ

ನಮ್ಮ ಶಾಲೆಯಲ್ಲಿ ೭೦ ನೇ ಸಂಭ್ರಮದ ಸ್ವತಂತ್ರೋತ್ಸವ ಜರಗಿತು. ಶಾಲಾ ದೈನಂದಿನ ಎಸ್ಸೆಂಬ್ಲಿಯಲ್ಲಿ ನಿವೃತ್ತ ಯೋಧ ಗೋವಿಂದ ನಾಯಕ್ ಮೊಗೇರು ದ್ವಜ ವಂದನೆ ಗೈಯುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮೊದಲು ತಂದೆ ತಾಯಿ, ಗುರುಹಿರಿಯರನ್ನು ಪ್ರೀತಿಸಿ ಮತ್ತೆ ದೇಶವನ್ನು ಪ್ರೀತಿಸಿ ಎನ್ನುವ ಸಂದೇಶವನ್ನಿತ್ತರು. ತಮ್ಮ ವೃತ್ತಿಯ ಅನುಭವವನ್ನು ಕೂಡಾ ಮಕ್ಕಳೊಡನೆ ಹಂಚಿಕೊಂಡರು. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ ವೈ ಸುಬ್ರಹ್ಮಣ್ಯ ಭಟ್ ರವರು ಸೈನಿಕ ಹುದ್ದೆಯನ್ನು ಪ್ರೀತಿಸಬೇಕು, ತಾವು ಮುಂದೆ ಸೈನಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನಿತ್ತರು. ವಾರ್ಡ್ ಮೆಂಬರ್ ಚಂದ್ರಾವತಿ ಟೀಚರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸುಚಿತ್ರ ಮುಂಗ್ಲಿಕಾನ ಉಪಸ್ಥಿತರಿದ್ದರು. ಅತಿಥಿ ಅಬ್ಯಾಗತರು ಸ್ವಾತಂತ್ರೋತ್ಸವದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ನಂತರ ಧ್ವನಿ ವರ್ಧಕದ ದೇಶ ಭಕ್ತಿಗಾನಕ್ಕೆ ಮಕ್ಕಳು ಮೆರವಣಿಗೆಯಲ್ಲಿ ಡಿಸ್ ಪ್ಲೇ ಪ್ರದರ್ಶನ ವಿತ್ತರು. ಭಾರತ ಮಾತೆಯಾಗಿ ಕುಮಾರಿ ಸಂಜನಾ ಹೃಷಿಕೇಶ್ ಹಾಗೂ ಗಾಂಧೀಜಿಯಾಗಿ ಹೇಮಂತ ಕೃಷ್ಣ ಮೆರವಣಿಗೆಯ ಮುಂದಾಳತ್ವ ನೀಡಿದರು.


  

No comments:

Post a Comment