Wednesday, June 3, 2015


ಸಂತಸದ ಆಗಮನ; ಸಂಭ್ರಮದ ಪ್ರವೇಶೋತ್ಸವ

ನಮ್ಮಶಾಲೆಯಲ್ಲಿ ಬೇಸಗೆಯ ರಜೆಯ ಮಜಾ ಸವಿದು ಶಾಲಾ ಗೋಜಿಗೆ ಹೊಸ ಬಟ್ಟೆ ಬ್ಯಾಗ್, ಬಣ್ಣದ ಕೊಡೆ ಹಿಡಿದು ಮರಳಿ ಆಗಮಿಸುತ್ತಿರುವ ದೊಡ್ಡ ಮಕ್ಕಳ ಸಂಭ್ರಮ ಒಂದೆಡೆಯಾದರೆ, ಹೊಸ ವಾತಾವರಣಕ್ಕೆ ನೂತನವಾಗಿ ಪುಟ್ಟ ಹೆಜ್ಜೆಯನ್ನಿಟ್ಟು ಅಮ್ಮನ ಕೈ ಹಿಡಿದು ಅಳುಕಿನಿಂದ ಬರುವ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಇನ್ನೊಂದೆಡೆ. ಈ ನೂತನ ಶೈಕ್ಷಣಿಕ ವರ್ಷ 2015 -16 ಮಕ್ಕಳ ಸಂತಸದ ಹಬ್ಬವಾಗಲೆಂದು ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಸಂತಸದ ಆಗಮನ; ಸಂಭ್ರಮದ ಪ್ರವೇಶೋತ್ಸವ
ನಮ್ಮಶಾಲೆಯಲ್ಲಿ ಬೇಸಗೆಯ ರಜೆಯ ಮಜಾ ಸವಿದು ಶಾಲಾ ಗೋಜಿಗೆ ಹೊಸ ಬಟ್ಟೆ ಬ್ಯಾಗ್, ಬಣ್ಣದ ಕೊಡೆ ಹಿಡಿದು ಮರಳಿ ಆಗಮಿಸುತ್ತಿರುವ ದೊಡ್ಡ ಮಕ್ಕಳ ಸಂಭ್ರಮ ಒಂದೆಡೆಯಾದರೆ, ಹೊಸ ವಾತಾವರಣಕ್ಕೆ ನೂತನವಾಗಿ ಪುಟ್ಟ ಹೆಜ್ಜೆಯನ್ನಿಟ್ಟು ಅಮ್ಮನ ಕೈ ಹಿಡಿದು ಅಳುಕಿನಿಂದ ಬರುವ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಇನ್ನೊಂದೆಡೆ. ಈ ನೂತನ ಶೈಕ್ಷಣಿಕ ವರ್ಷ ೨೦೧೫ -೧೬ ಮಕ್ಕಳ ಸಂತಸದ ಹಬ್ಬವಾಗಲೆಂದು ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 
ನವಾಗತ ಮಕ್ಕಳಿಗೆ ಅತಿಥಿವರ್ಯರು ಬಣ್ಣದ ಪುಗ್ಗೆ ನೀಡಿ, ಮಕ್ಕಳೆಲ್ಲಾ ಪುಷ್ಪ ಗುಚ್ಛ ಹಿಡಿದು ಪುಟಾಣಿ ಮಕ್ಕಳನ್ನು ಮೆರವಣಿಗೆಗೆ ಸ್ವಾಗತಿಸಿದರು. ಪ್ರವೇಶೋತ್ಸವ ಗೀತೆಯನ್ನು ಧ್ವನಿವರ್ಧಕದ ಸಹಾಯದಿಂದ ಕೇಳಿಸಿ ಮಕ್ಕಳ ಮನರಂಜಿಸಲಾಯಿತು. ಮೆರವಣಿಗೆ ಮುಗಿಸಿ ಆಗಮಿಸಿದ ಮಕ್ಕಳಿಗೆ ಶಾಲಾ ವ್ಯವಸ್ಥಾಪಕರು ಹೂ ನೀಡಿ ಸ್ವಾಗತಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ವಾರ್ಡ್ ಮೆಂಬರ್ ಶ್ರೀ ರವಿ.ಕೆ ಯವರು ಉತ್ತಮ ವಿದ್ಯಾಭ್ಯಾಸವನ್ನು ಪಡೆದ ಈ ಪುಟ್ಟ ಮಕ್ಕಳೇ ಮುಂದೆ ನಮ್ಮ ಸಮಾಜದ ಅಭಿವೃದ್ಧಿಗೆ ಮಾದರಿಯಾಗಿರುವರು ಎಂದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ, ಉಚಿತ ಸಮವಸ್ತ್ರ, ಬ್ಯಾಗ್, ಸ್ಲೇಟ್, ಬಳಪವನ್ನು ಕೊಡುಗೆಯಾಗಿ ನೀಡಿ ದೆಹಲಿಯಲ್ಲಿರುವ ವ್ಯವಸ್ಥಾಪಕರ ಕುಟುಂಬಸ್ಥರಾದ  ಶ್ರೀಮತಿ ಸಾವಿತ್ರಿಯವರು ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು. ಇನ್ನೊರ್ವ ಮುಖ್ಯ ಅತಿಥಿ ಸ್ಥಾನವಹಿಸಿದ ಶ್ರೀ ರಘು ಪುಣೆಯವರು ಸ್ಲೇಟ್, ಬ್ಯಾಗ್ ನ್ನು ವಿತರಿಸಿದರು. ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಿ.ಟಿ.ಎ. ಉಪಾಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಪದ್ಮನಾಭ ಆರ್ ವಂದನರ್ಪಾಣೆಗೈದರು. ಕುಮಾರಿ ಅಂಜನಾ.ಎಸ್ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಅಪಾರ ಸಂಖ್ಯೆಯಲ್ಲಿ ರಕ್ಷಕರ ಸಮೂಹವು ನೆರೆದಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನೆರೆದವರಿಗೆಲ್ಲ ಪಿ.ಟಿ.ಎ. ವತಿಯಿಂದ ಲಘು ಉಪಾಹಾರದ ವ್ಯವಸ್ಥೆ ಹಾಗೂ ಮುಖ್ಯೋಪಾಧ್ಯಾಯರ ವತಿಯಿಂದ ಹೋಳಿಗೆ ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ನವಾಗತ ಮಕ್ಕಳಿಗೆ ಅತಿಥಿವರ್ಯರು ಬಣ್ಣದ ಪುಗ್ಗೆ ನೀಡಿ, ಮಕ್ಕಳೆಲ್ಲಾ ಪುಷ್ಪ ಗುಚ್ಛ ಹಿಡಿದು ಪುಟಾಣಿ ಮಕ್ಕಳನ್ನು ಮೆರವಣಿಗೆಗೆ ಸ್ವಾಗತಿಸಿದರು. ಪ್ರವೇಶೋತ್ಸವ ಗೀತೆಯನ್ನು ಧ್ವನಿವರ್ಧಕದ ಸಹಾಯದಿಂದ ಕೇಳಿಸಿ ಮಕ್ಕಳ ಮನರಂಜಿಸಲಾಯಿತು. ಮೆರವಣಿಗೆ ಮುಗಿಸಿ ಆಗಮಿಸಿದ ಮಕ್ಕಳಿಗೆ ಶಾಲಾ ವ್ಯವಸ್ಥಾಪಕರು ಹೂ ನೀಡಿ ಸ್ವಾಗತಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ವಾರ್ಡ್ ಮೆಂಬರ್ ಶ್ರೀ ರವಿ.ಕೆ ಯವರು ಉತ್ತಮ ವಿದ್ಯಾಭ್ಯಾಸವನ್ನು ಪಡೆದ ಈ ಪುಟ್ಟ ಮಕ್ಕಳೇ ಮುಂದೆ ನಮ್ಮ ಸಮಾಜದ ಅಭಿವೃದ್ಧಿಗೆ ಮಾದರಿಯಾಗಿರುವರು ಎಂದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ, ಉಚಿತ ಸಮವಸ್ತ್ರ, ಬ್ಯಾಗ್, ಸ್ಲೇಟ್, ಬಳಪವನ್ನು ಕೊಡುಗೆಯಾಗಿ ನೀಡಿ ದೆಹಲಿಯಲ್ಲಿರುವ ವ್ಯವಸ್ಥಾಪಕರ ಕುಟುಂಬಸ್ಥರಾದ  ಶ್ರೀಮತಿ ಸಾವಿತ್ರಿಯವರು ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು. ಇನ್ನೊರ್ವ ಮುಖ್ಯ ಅತಿಥಿ ಸ್ಥಾನವಹಿಸಿದ ಶ್ರೀ ರಘು ಪುಣೆಯವರು ಸ್ಲೇಟ್, ಬ್ಯಾಗ್ ನ್ನು ವಿತರಿಸಿದರು. ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಿ.ಟಿ.ಎ. ಉಪಾಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಪದ್ಮನಾಭ ಆರ್ ವಂದನರ್ಪಾಣೆಗೈದರು. ಕುಮಾರಿ ಅಂಜನಾ.ಎಸ್ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಅಪಾರ ಸಂಖ್ಯೆಯಲ್ಲಿ ರಕ್ಷಕರ ಸಮೂಹವು ನೆರೆದಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನೆರೆದವರಿಗೆಲ್ಲ ಪಿ.ಟಿ.ಎ. ವತಿಯಿಂದ ಲಘು ಉಪಾಹಾರದ ವ್ಯವಸ್ಥೆ ಹಾಗೂ ಮುಖ್ಯೋಪಾಧ್ಯಾಯರ ವತಿಯಿಂದ ಹೋಳಿಗೆ ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.




No comments:

Post a Comment