Thursday, September 3, 2015



         ಸಾರ್ವಜನಿಕ ವರಮಹಾಲಕ್ಷ್ಮೀ ಪೂಜೆ

ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲಾ ಮಾತೃ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಶಾಲಾ ಪರಿಸರದಲ್ಲಿ ಜರಗಿತು. ಪುರೋಹಿತರಾದ ಸಜಂಗದ್ದೆ ಶ್ರೀಧರ ಭಟ್ ಮತ್ತು ಬಳಗದವರ ನೇತೃತ್ವದಲ್ಲಿ ಹಿರಿಯ ಮುತ್ತೈದೆ ಶ್ರೀಮತಿ ಸುಗುಣಾ ಬರೆಕರೆಯವರು ಪೂಜೆ ನೆರೆವೇರಿಸಿದರು. ಮಾತೆಯರಿಂದ ಲಲಿತಾಸಹಸ್ರನಾಮ ಪಾರಾಯಣ ನಡೆಯಿತು. ಶಾಲಾ ಸಂಸ್ಕ್ರತ ಶಿಕ್ಷಕ ಶ್ರೀ ಶಿವರಾಮ ಭಟ್ .ಕೆ ಯವರು ವರಮಹಾಲಕ್ಷ್ಮೀ ವ್ರತಾಚರಣೆಯ ಮಹತ್ವವನ್ನು ನೆರೆದವರಿಗೆಲ್ಲ ಮನದಟ್ಟಾಗುವಂತೆ ತಿಳಿಸಿದರು. 
ಈ ಸಂದರ್ಭದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡುತ್ತಿರುವ ಮಾತೃ ಸಂಘದ ಸದಸ್ಯರಾದ ಶ್ರೀಮತಿ ಅನುರೂಪ ಕೆದಂಬಾಯಿ ಮೂಲೆ ಹಾಗೂ ಶ್ರೀಮತಿ ನಯನಾ ಬಳಕ್ಕ ಇವರನ್ನು ಗೌರವಿಸಲಾಯಿತು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ಶಾಲಾ ಮಕ್ಕಳಿಗೆ ವೃತ್ತಿ ಪರಿಚಯ ತರಬೇತಿಯನ್ನು ಉಚಿತವಾಗಿ ನೀಡುತ್ತಿರುವುದರಿಂದ ಅವರನ್ನು ಗೌರವಿಸಲಾಯಿತು. 
ಸುಮಾರು ೩೦೦ ಕ್ಕೂ ಅಧಿಕ ಮುತ್ತೈದೆಯರು ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ಆಗಮಿಸಿದವರಿಗೆಲ್ಲಾ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.






No comments:

Post a Comment