Tuesday, September 8, 2015

  ಸಂಸ್ಕ್ರತ ದಿನಾಚರಣೆ 
     ಸಂಸ್ಕ್ರತದ ಪಿತ ಪಾನಿಣಿಯವರ ಜನ್ಮದಿನವಾದ ನೂಲ ಹುಣ್ಣಿಮೆಯಂದು ಎಲ್ಲೆಡೆ ಸಂಸ್ಕ್ರತ ದಿನಾಚರಣೆಯನ್ನು ಆಚರಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 
ಸಂಸ್ಕ್ರತ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ವಸ್ತು ಪ್ರದರ್ಶನವನ್ನು ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ದೀಪ ಬೆಳಗಿಸಿ ಉಧ್ಘಾಟಿಸಿದರು. ನಮ್ಮ ದಿನ ನಿತ್ಯದ ಬಳಕೆಯ ನಿತ್ಯೋಪಯೋಗಿ ಹಲವಾರು ವಸ್ತುಗಳನ್ನು ಸಂಸ್ಕ್ರತ ನಾಮಧ್ಯೇಯಯೊಂದಿಗೆ ಪ್ರದರ್ಶಿಸಲಾಯಿತು. ಈ ಸಂದರ್ಭ ಗ್ರಂಥಾಲಯದಲ್ಲಿರುವ ಹಲವಾರು ಸಂಸ್ಕ್ರತ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ನಂತರ ೧ ರಿಂದ ೭ ನೇ ತರಗತಿಯ ಎಲ್ಲಾ ಸಂಸ್ಕ್ರತ ಮಕ್ಕಳನ್ನು ಸೇರಿಕೊಂಡು ಅಭಿನಯ ಗೀತೆ, ಸಮೂಹಗಾನ, ನೃತ್ಯ ಮೊದಲಾದ ಮನರಂಜನಾ ಕಾರ್ಯಕ್ರಮ ಜರಗಿತು. ಸಂಸ್ಕ್ರತ ಶಿಕ್ಷಕರಾದ ಕೆ.ಶಿವರಾಮ್  ಭಟ್‌ರವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದು, ಈ ಸಂದರ್ಭದಲ್ಲಿ ಎಲ್ಲರು ಸಂಸ್ಕ್ರತವನ್ನು ಅರಿತು ಭವಿಷ್ಯದಲ್ಲಿ ಉತ್ತಮ ಸಂಸ್ಕ್ರತ ಪಾಂಡಿತ್ಯವನ್ನು ಗಳಿಸಿರೆಂದು ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಅಕ್ಷಯ್ ವೈ, ರಂಜನ್ ಎಸ್ ಹಾಗೂ ಗಿರೀಶ ಕಾರ್ಯಕ್ರಮ ನಿರೂಪಿಸಿದರು.








No comments:

Post a Comment