Friday, September 5, 2014


                                        ಶಿಕ್ಷಕ ದಿನಾಚರಣೆ
ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿಶಿಕ್ಷಕ ದಿನಾಚರಣೆಯ ಅಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ಸಮಾಜ ವಿಜ್ಞಾನ ಕ್ಲಬಿನ ವತಿಯಿಂದ ಡಾ.ರಾಧಾಕೃಷ್ಣನವರ ವ್ಯಕ್ತಿ ಪರಿಚಯವನ್ನು ಮಂಡಿಸಲಾಯಿತು. ಶಾಲಾ ಪರಿಸರದ ನಿವೃತ್ತ ಶಿಕ್ಷಕರಾದ ಶಿರಂತಡ್ಕ ಸುಬ್ರಹ್ಮಣ್ಯ ಭಟ್ (ನಿವೃತ್ತ ಪಾಂಶುಪಾಲ ಸೀನಿಯರ್ ಕಾಲೇಜ್ ವಿಟ್ಲ) ಹಾಗೂ ಕೃಷ್ಣ ಭಟ್ ಕುಂಚಿನಡ್ಕ (ನಿವೃತ್ತ ಮುಖ್ಯೋಪಾಧ್ಯಾಯ (ಬಿ.ಎ.ಯು.ಪಿ.ಎಸ್.ಕಾಟುಕುಕ್ಕೆ) ಇವರ ಸ್ವಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲ ಪುಷ್ಪ, ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಾಪನ ವೃತ್ತಿ ಎನ್ನುವುದು ಕೆಲಸವಲ್ಲ, ಧರ್ಮ ಎಂದು ಶಿರಂತಡ್ಕ ಸುಬ್ರಹ್ಮಣ್ಯ ಭಟ್‌ರವರು ತಿಳಿಸಿದರು. ಗುರು ವಿನ ಮಹತ್ವವನ್ನು ಕುಂಚಿನಡ್ಕ ಕೃಷ್ಣ ಭಟ್‌ರು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ.ಶಿವರಾಮ ಭಟ್, ಪಿ.ಟಿ.ಎ. ಅಧ್ಯಕ್ಷ ಲಕ್ಷ್ಮೀಪ್ರಿಯ ಸರಳಾಯ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ನಿವೃತ್ತ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್, ಮಕ್ಕಳು ಹಾಗೂ ಸಹ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಶಾಲಾ ಪ್ರತಿನಿಧಿಗಳಾಗಿ ಪಾಲ್ಗೊಂಡರು.
ಬಳಿಕ ಪ್ರಧಾನ ಮಂತ್ರಿ ಹಾಗೂ ಮಕ್ಕಳೊಂದಿಗೆ ನಡೆದ ಟೆಲಿಕಾನ್ಫರೆನ್ಸ್‌ನ್ನು ಎಲ್.ಸಿ.ಡಿ ಮುಖಾಂತರ ಮಕ್ಕಳಿಗೆ ಪ್ರದರ್ಶಿಸಲಾಯಿತು. ಅದನ್ನು ಹಿಂದಿ ಶಿಕ್ಷಕ ಮಿಥುನ್ ವಿ.ಆರ್.ರವರು ಮಕ್ಕಳಿಗೆ ಕನ್ನಡಕ್ಕೆ ಅನುವಾದ ಮಾಡಿಕೊಟ್ಟರು.






No comments:

Post a Comment