ದ್ವಿದಿನ ಸಹವಾಸ ಶಿಬಿರ
’ಉತ್ಥಾನ’ ದ ಉದ್ಘಾಟನೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲೆಯಲ್ಲಿ ಜಿಲ್ಲಾ ಪಂಚಾಯತು ಕಾಸರಗೋಡು, ಡಯಟ್ ಮಾಯಿಪ್ಪಾಡಿ, ಶಿಕ್ಷಣ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ’ಸಾಕ್ಷರಂ’ ಕಾರ್ಯಕ್ರಮದ ಅಂಗವಾಗಿ ಮಕ್ಕಳ ದ್ವಿದಿನ ಸಹವಾಸ ಶಿಬಿರ ’ಉತ್ಥಾನ’ವನ್ನು 08.೦09.14ನೇ ಸೋಮವಾರದಂದು ಎಣ್ಮಕಜೆ ಪಂಚಾಯತಿನ ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷ ಶ್ರೀ ಬಿ.ಎಸ್.ಗಾಂಭೀರರವರು ದೀಪಜ್ವಾಲನೆಯ ಮುಖಾಂತರ ಉದ್ಘಾಟಿಸಿ ’ಮಕ್ಕಳ ಬಹುಮುಖ ಪ್ರತಿಭೆಗಳಿಗೆ ಪಠ್ಯ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ.’ ಹಲವು ಶೈಕ್ಷಣಿಕ ಕಾರ್ಯಕ್ರಮವನ್ನು ಕೇರಳ ಸರಕಾರವು ಮುತುವರ್ಜಿಯಿಂದ ವಹಿಸುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳನ್ನು ಬೆಳೆಯುವಂತೆ ಮಾಡುತ್ತಿರುವುದು ಸಂತಸದ ವಿಷಯ’ ಎಂದರು. ಅಧ್ಯಕ್ಷ ಸ್ಥಾನ ವಹಿಸಿದ ವಾರ್ಡ್ ಸದಸ್ಯ ಶ್ರೀ ರವಿ.ಕೆ.ಯವರು ಒಂದು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ರಕ್ಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆ ಒಟ್ಟಾಗಿ ದುಡಿದರೆ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯ’ ಎಂದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ಲಕ್ಷ್ಮೀ ಪ್ರಿಯ ಸರಳಾಯರು ’ಪ್ರತಿಯೊಬ್ಬನಿಗೂ ಪ್ರತಿಭೆಯಿದೆ. ಅದನ್ನು ಹೊರಗೆಡಹಲು ಅವಕಾಶ ಕಲ್ಪಿಸಿಕೊಡುವುದು ಹೆತ್ತವರ, ಶಿಕ್ಷಕರ ಶಾಲೆಯ ಕೆಲಸ’ ನುಡಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ’ದೌರ್ಬಲ್ಯಗಳನ್ನು ಸವಾಲನ್ನಾಗಿ ಸ್ವೀಕರಿಸಿದಾಗ ಯಾವುದು ಕಷ್ಟವಲ್ಲ’ಎಂದು ತಿಳಿಸಿದರು.ಶಾಲಾ ಮುಖ್ಯ ಗುರುಗಳಾದ ಶ್ರೀ ಪಿ.ಶಿವರಾಂ ಭಟ್ ಸ್ವಾಗತಿಸಿ, ಸಂಸ್ಕೃತ ಶಿಕ್ಷಕ ಶ್ರೀ ಕೆ.ಶಿವರಾಮ್ ಭಟ್ ವಂದಿಸಿದರು. ಕುಮಾರಿಯರಾದ ಕವಿತಾಲಕ್ಷ್ಮೀ ಎನ್.ಎಲ್ ಹಾಗೂ ಮಧುರಾ.ವೈ ಪ್ರಾರ್ಥಿಸಿ, ಶಿಕ್ಷಕ ಶ್ರೀ ಸಚ್ಚಿದಾನಂದ.ಎಸ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment