ಉತ್ಥಾನ ಸಹವಾಸ ಶಿಬಿರದ ಸಮಾರೋಪ ಸಮಾರಂಭ
ನಮ್ಮ ಶಾಲೆಯಲ್ಲಿ ಸಾಕ್ಷರಂ ಯೋಜನೆಯ ಅಂಗವಾಗಿ ನಡೆದ ದ್ವಿದಿನ ಸಹವಾಸ ಶಿಬಿರ ಉತ್ಥಾನ ಉದ್ಘಾಟನೆಯೊಂದಿಗೆ ಆರಂಭಗೊಂಡಿತು. ಹಲವು ಭಾಷಾ ಆಟ, ಚಟುವಟಿಕೆಗಳು,ನಿರ್ಮಾಣ ಚಟುವಟಿಕೆಗಳು, ಮೇಪ್ ಗುರುತಿಸುವುದು, ಹೊರಾಂಗಣ ಆಟ, ಭಜನೆ, ಜೀವ ವೈವಿಧ್ಯತೆಯ ಕುರಿತಾದ ಸಿ.ಡಿ. ಪ್ರದರ್ಶನ, ವ್ಯಾಯಾಮ, ಗಣಿತ ಚಟುವಟಿಕೆ, ನಾಟಕಾಭಿನಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿ, ನಾಟಕ ಪ್ರದರ್ಶನ, ಇತ್ಯಾದಿ ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಸರಳಾಯ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ೩ನೇ ತರಗತಿ ಯಿಂದ ಆರಂಭಿಸಿ ೭ನೇ ತರಗತಿಯವರೆಗಿನ ಸುಮಾರು ೨೬ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಸರಳಾಯರು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಹಾಗೂ ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ಶಿಕ್ಷಕ ಉಪಸ್ಥಿತರಿದ್ದರು. ಮಕ್ಕಳು ತಮ್ಮ ಎರಡು ದಿನದ ಅನುಭವವನ್ನು ಹಂಚಿಕೊಂಡರು. ಶ್ರೀ ಸಚ್ಚಿದಾನಂದ.ಎಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸವಿತ, ಭವ್ಯ, ರಕ್ಷಿತ ಪ್ರಾರ್ಥಿಸಿದರು, ಶಿಕ್ಷಕ ವೆಂಕಟವಿದ್ಯಾ ಸಾಗರರವರು ವಂದನಾರ್ಪಣೆ ಗೈದರು.
No comments:
Post a Comment