Monday, September 8, 2014


ಸಂಭ್ರಮದ ಓಣಂ ಆಚರಣೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಕೇರಳದ ನಾಡ ಹಬ್ಬ ಓಣಂನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ತರಗತಿಯಲ್ಲಿ ಮಕ್ಕಳು ಹೂವಿನಿಂದ ಆಕರ್ಷಕ ರಂಗೋಲಿಯನ್ನು ಬಿಡಿಸಿ ಮಹಾಬಲಿಗೆ ಭವ್ಯ ಸ್ವಾಗತವನ್ನು ಕೋರಿದರು. ಬಳಿಕ ಓಣಂ ಹಬ್ಬಕ್ಕೆ ವಿಶೇಷ ಕಳೆ ನೀಡುವ’ಓಣ ಸದ್ಯ’ ದಲ್ಲಿ  ಅನ್ನ, ಸಾರು, ಸಾಂಬಾರು, ಪಲ್ಯ, ಚಟ್ನಿ, ಹಪ್ಪಳ, ಪಾಯಸ, ಕ್ಷೀರ, ಇತ್ಯಾದಿ 20 ಬಗೆಯ ನಾನಾ ಖಾದ್ಯಗಳನ್ನೊಳಗೊಂಡ ಭೂರಿ ಭೋಜನ ನಡೆಯಿತು. ರಕ್ಷಕರ / ಹೆತ್ತವರ ಕೊಡುಗೆಯಿಂದಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. 
 


 






No comments:

Post a Comment