Wednesday, June 29, 2016


                     ವಿಶ್ವ ಪರಿಸರ ದಿನ

ಮಾನವನು ಅಭಿವೃದ್ಧಿ ಪಥದತ್ತ ಭಾವಿಸುತ್ತಿರುವ ಪರಿಸರದ ಮೇಲೆ ಬೀರುವ ಪರಿಣಾಮದಿಂದ ಜಾಗೃತರಾಗಲು ಜೂನ್ ೫ ಪರಿಸರ ದಿನ ಮಹತ್ವದ ಅರಿವು ಮೂಡಿಸಲು ನಮ್ಮ ಶಾಲೆಯಲ್ಲಿ ವಿವಿಧ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು. ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣೆಯ ಕುರಿತಾದ ಪ್ರಬಂಧವನ್ನು ವಿದ್ಯಾರ್ಥಿ ಸಂಜನಾ ಹೃಷಿಕೇಶ್ ಮಂಡಿಸಿದಳು. ಪರಿಸರ ಶುಚಿತ್ವಕ್ಕೆ ಸಂಬಂಧಿಸಿದ ಪ್ರತಿಜ್ಞೆಯನ್ನು ಶಿಕ್ಷಕ ಪದ್ಮನಾಭ ಆರ್ ಇವರು ಮಕ್ಕಳಿಗೆ ತಿಳಿಸಿದರು. ಪ್ರತಿ ತರಗತಿಯಲ್ಲೂ ಭಿತ್ತಿ ಪತ್ರಿಕೆ, ಪತ್ತೆ ಹಚ್ಚುವ ಇತ್ಯಾದಿ ಚಟುವಟಿಕೆಯನ್ನು ಮಾಡಲಾಯಿತು. ಈ ಶೈಕ್ಷಣಿಕ ವರ್ಷ ದ್ವಿದಳ ಧಾನ್ಯ ವರ್ಷ ಇದರ ಅಂಗವಾಗಿ ಮಕ್ಕಳಿಗೆ ಧಾನ್ಯಗಳನ್ನು ಪತ್ತೆ ಹಚ್ಚುವ ಚಟುವಟಿಕೆಯನ್ನು ನಡೆಸಿ ನಂತರ ಶಾಲಾ ಪರಿಸರದಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತುವ ಚಟುವಟಿಕೆಯನ್ನು ಮಾಡಲಾಯಿತು. ನಂತರ ಎಲ್ಲಾ ಮಕ್ಕಳಿಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ಮಕ್ಕಳಿಗೆ ಗಿಡವನ್ನು ವಿತರಿಸಿದರು. 




No comments:

Post a Comment