Wednesday, August 22, 2012

                    ಶಾಲಾ ಶೈ ಕ್ಷಣಿಕ ಪ್ರವಾಸ ಮಾರ್ಚ್ 09
ತಾರೀಕು 09-03-2012ನೇ ಶುಕ್ರವಾರ ಬೆಳಗ್ಗೆ ನಮ್ಮ ಶಾಲೆಯಿಂದ ನಿಗದಿ ಪಡಿಸಿದ "ಮಹಾಲಕ್ಷ್ಮೀ" ಬಸ್ಸಿನಲ್ಲಿ ಅಧ್ಯಾಪಕರು, ವಿಧ್ಯಾರ್ಥಿಗಳು ಮತ್ತು ಹೆತ್ತವರು ಒಟ್ಟು 98 ಮಂದಿ ಒಂದು ದಿನದ ಶೈ ಕ್ಷಣಿಕ ಪ್ರವಾಸ ಹೊರಟೆವು. 
ಶಾಲಾ ಮುಖ್ಯೋಪಾಧ್ಯಾಯರು ತೆಂಗಿನಕಾಯಿ ಒಡೆಯುವ ಮೂಲಕ ಕಣ್ಣೂರಿನ "ವಿಸ್ಮಯ ಪಾರ್ಕ್"ಪ್ರವಾಸಕ್ಕೆ ಚಾಲನೆಯಿತ್ತರು.
             ಬಸ್ಸಿನಲ್ಲಿ ಹಾಡು,ಕುಣಿತಗಳೊಂದಿಗೆ ಮಜಾ ಮಾಡಿದ ಮಕ್ಕಳು ೮-೩೦ಕ್ಕೆ ನೀಲೇಶ್ವರದಲ್ಲಿ ಬೆಳಗಿನ ಉಪಾಹಾರ ಸ್ವೀಕರಿಸಿದೆವು.10-30ಕ್ಕೆ ಸರಿಯಾಗಿ ನಾವು ಪರಶಿನಕಡವು ಉರಗೋದ್ಯಾನವನ್ನು ಸಂದರ್ಶಿಸಿದೆವು.ಅಲ್ಲಿ ವಿವಿಧ ತರದ ಪ್ರಾಣಿಗಳು,ಪ ಕ್ಷಿಗಳು,ಮತ್ತು ನಾನಾ ವಿಧದ ಉರಗಗಳನ್ನು ನೋಡಿ ಸಂತಸಪಟ್ಟೆವು.
         11-15ರಿಂದ ಸಾಯಂ ಗಂಟೆ 5-೦೦ರ ತನಕ ವಿಸ್ಮಯ ಪಾರ್ಕ್ ನಲ್ಲಿರುವ ಜಾರುಬಂಡಿಗಳು. ಟೂಬುಗಳು,ಮ್ಯೂಸಿಕಲ್ ಫಾಲ್ಸ್,ಫಿಶ್,ಟ್ರೈನ್,ಕಾರ್,ಭೂತ ಬಂಗಲೆ,4ಡಿ ಸಿನೆಮಾ ಇತ್ಯಾದಿ ಸಾಹಸಮಯವಾದ ಆಟಗಳಲ್ಲಿ ಭಾಗವಹಿಸಿ ಖುಷಿಪಟ್ಟೆವು.ಅಧ್ಯಾಪಕರು,ಹೆತ್ತವರು ಮಕ್ಕಳಾಗಿ ಆಡಿದ ಆಕ್ಷಣ ಎಂದಿಗೂ ಮರೆಯಲು ಸಾಧ್ಯವಿಲ್ಲ.

No comments:

Post a Comment