Wednesday, August 22, 2012

                               ಪ್ರವೇಶೋತ್ಸವ 2012-2013
         ನೂತನ ಶೈಕ್ಷಣಿಕ ವರ್ಶದಲ್ಲಿ  ಪ್ರವೇಶೋತ್ಸವವು ವಿಘ್ನ ನಿವಾರಕನಾದ ಗಣಪತಿ ಹವನದೊಂದಿಗೆ ವಿಜ್ರುಂಭಣೆಯಿಂದ ಜರಗಿತು. ಸ್ವಾಮಿ ವಿವೇಕಾನಂದರ ವೇಷಧಾರಿಯ ನೇತೃತ್ವದಲ್ಲಿ ಬೊಂಬೆ ಕುಣಿತ,ಜೋಕರ್ ಹಾಗೂ ಇನ್ನಿತರ ವೇಷಗಳ ಭವ್ಯ ಮೆರವಣಿಗೆಯಲ್ಲಿ ನವಾಗತರನ್ನು ಶಾಲೆಗೆ ಕರೆತರಲಾಯಿತು.ಬಳಿಕ ಶಿಕ್ಷಕಿಯರಾದ ಶ್ರೀಮತಿ ಗೀತಾ ಮತ್ತು ಗೀತಾಂಜಲಿಯವರು ಆರತಿ ಬೆಳಗಿ ಪುಟಾಣಿ ಮಕ್ಕಳನ್ನು ಸ್ವಾಗತಿಸಲಾಯಿತು.








ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿ ಕ್ಷಕ ಸಂಘದ ಅಧ್ಯಕ್ಷ ಶ್ರೀವಿವೇಕಾನಂದ ಬಿ.ಕೆ.ಯವರು ವಹಿಸಿದ್ದರು.ವಾರ್ಡ್ ಸದಸ್ಯ ಶ್ರೀ ರವಿ.ಕೆ.ಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು.ಶಾಲಾ ವ್ಯವಸ್ಥಾಪಕ ಶ್ರೀಹೃಷಿಕೇಶ ವಿ.ಎಸ್.ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂತನ ಮಕ್ಕಳಿಗೆ ಬ್ಯಾಡ್ಜ್ ,ಬ್ಯಾಗ್,ಪುಸ್ತಕ, ಹಾಗೂ ವಿದ್ಯಾಭಿಮಾನಿ ಶಿರಂತಡ್ಕ ಗಣಪತಿ ಭಟ್ ರವರ ವತಿಯಿಂದ ಸ್ಲೇಟು ಮತ್ತು ಬಳಪ ವಿತರಿಸಲಾಯಿತು.ಪಿ.ಟಿ.ಎ.ಅಧ್ಯ ಕ್ಷರ ವತಿಯಿಂದ ಸಿಹಿ ತಿಂಡಿ ವಿತರಣೆಯಾಯಿತು.ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ವಂದಿಸಿದರು.ಹೆತ್ತವರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂತು.
   

No comments:

Post a Comment