Wednesday, August 22, 2012


       ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜೂನ್ 26
      ಈ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ತಾರೀಕು 26 -06-2012 ನೇ ಮಂಗಳವಾರ  ಅಪರಾಹ್ಣ  ಗಂಟೆ    3-00ರಿಂದ ಜರಗಿತು. ಶಾಲಾ ಮುಖ್ಯೋಪಾಧ್ಯಾಯರು ಗತ ವರ್ಷದ ವರದಿಯನ್ನು ಮಂಡಿಸಿದರು. ಶಿಕ್ಷಕ ಪದ್ಮನಾಭರು ಲೆಕ್ಕಪತ್ರ ಮಂಡಿಸಿದರು.ಹೊಸದಾಗಿ ಸ್ಕೂಲ್ ಮೇನೇಜ್ ಮೆಂಟ್ ಕಮಿಟಿಯ ರೂಪೀಕರಣವಾಯಿತು.ಈ ಶೈಕ್ಷಣಿಕ ವರ್ಷದಲ್ಲಿ ನಾವು ಹಮ್ಮಿಕೊಳ್ಳುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ.ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯ ಶ್ರೀ ರವಿ.ಕೆ. ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ರಾಧಿಕಾ ಎಡಮಲೆ ಉಪಸ್ಥಿತರಿದ್ದರು.ಶಿಕ್ಷಕ ಪಿ.ಶಿವರಾಮ ಭಟ್ಟರು ಸ್ವಾಗತಿಸಿ ಕೆ.ಶಿವರಾಮ ಭಟ್ಟರು ವಂದನಾರ್ಪಣೆಗೈದರು. ಸುಮಾರು100ಕ್ಕೂ ಅಧಿಕ ಹೆತ್ತವರು ಸಭೆಯಲ್ಲಿ ಭಾಗವಹಿಸಿದರು.

No comments:

Post a Comment