Wednesday, August 22, 2012

 ಹಿರಿಮೆ 2011-2012
              ತಾರೀಕು 24-03-2012ನೇ ಶನಿವಾರದಂದು ಎಸ್.ಎನ್.ಎಲ್.ಪಿ. ಪೆರ್ಲದಲ್ಲಿ ಜರಗಿದಎಣ್ಮಕಜೆ ಪಂಚಾಯತು ವ್ಯಾಪ್ತಿಯ 17 ಶಾಲೆಗಳ ಹಿರಿಮೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ "ಸ್ತ್ರೀಸಬಲೀಕರಣ" ಎಂಬ ಮಂಡಲಕ್ಕೆ ಸಂಬಂಧಿಸಿ ಈ ಶೈ ಕ್ಷಣಿಕ ವ ರ್ಷದಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ಉತ್ತಮ ಪ್ರಬಂಧವನ್ನು ಮಂಡಿಸಿದ್ದು ,ಪಂಚಾಯತು ಮಟ್ಟದಲ್ಲಿ ಅತ್ತ್ಯುತ್ತಮ ಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ.ಶಾಲೆಯ ಎಲ್ಲಾ ಅಧ್ಯಾಪಕರು ಮತ್ತು 11 ಮಂದಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಮಂಡಲಕ್ಕೆ ಸಂಬಂಧಿಸಿ ಮಾಡಿದ ಚಟುವಟಿಕೆಗಳ ಸ್ಲೈಡ್ ಶೋ,ಸಾಬೂನು ತಯಾರಿ,ಮುತ್ತು ಮಾಲೆ,ಹೊಲಿಗೆ ತರಬೇತಿಯ ಉತ್ಪನ್ನಗಳು,ಶಾಲಾ ತರಕಾರಿ ತೋಟದಲ್ಲಿ ಬೆಳೆದ ಬದನೆ,ತೊಂಡೆ,ಬಸಳೆ,ಪಡುವಲಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಯಿತು.ತೀರ್ಪುಗಾರರಾಗಿ ಸಹಕರಿಸಿದ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಆಯಿಶಾ ಪೆರ್ಲ,ಪಂಚಾಯತು ಸದಸ್ಯೆ ಶ್ರೀಮತಿ ಶಾರದಾ ಮೇಡಂ ಮತ್ತು ಸಿ.ಆರ್.ಸಿ.ಸೆಕ್ರೆಟರಿ ಶ್ರೀದೇವದಾಸ್ ಕಜಂಪಾಡಿ ಅವರು ಸ್ಪರ್ಧಾತ್ಮಕವಾಗಿ ಜರಗಿದ ಹಿರಿಮೆ ಬಗ್ಗೆ ಅಭಿಪ್ರಾಯಗಳನ್ನು ಪ್ರಕಟಿಸಿದರು.

No comments:

Post a Comment