Friday, December 12, 2014

ಮನೋಲ್ಲಾಸ ಯಾತ್ರೆ
ಸ್ವರ್ಗ -ನ-22 ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲಾ ಸಾಕ್ಷರ ಯೋಜನೆ ಮತ್ತು ಐ.ಇ.ಡಿ.ಸಿಗೊಳಪಟ್ಟ ವಿದ್ಯಾರ್ಥಿಗಳು ತಮ್ಮನ್ನು ಪ್ರಕೃತಿಯೊಂದಿಗೆ ತೆರೆದುಕೊಳ್ಳುವಂತೆ ಮಾಡಲು ಮನೋಲ್ಲಾಸ ಪ್ರವಾಸ ಮಾಡಿದರು. ಶಾಲೆಯಿಂದ ಈಶ್ವರಮಂಗಲದ ಹನುಮಗಿರಿ,ಅಡೂರು ಬಳವಂತಡ್ಕದ ತೂಗು ಸೇತುವೆ,ಪಯಸ್ವಿನಿ ನದಿ ಹಾಗೂ ಬೇಕಲ ಕೋಟೆ ಮತ್ತು ಸಮುದ್ರ ಕಿನಾರೆಯಲ್ಲಿ ಕುಣಿದು ಕುಪ್ಪಳಿಸಿದರು .ಮಕ್ಕಳೊಂದಿಗೆ ಶಿಕ್ಷಕರಾದ ಪದ್ಮನಾಭ .ಆರ್,ಮಿಥುನ್.ವಿ.ಆರ್,ಶ್ರೀಮತಿ ಗೀತಾಕುಮಾರಿ,ಸಚ್ಚಿದಾನಂದ.ಎಸ್,ಎಸ್.ಎನ್.ವೆಂಕಟವಿದ್ಯಾಸಾಗರ್,ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀಪ್ರಿಯ ಶರಳಾಯರು ನೇತೃತ್ವ ನೀಡಿದ್ದರು.ಇಪ್ಪತೈದು ವಿದ್ಯಾರ್ಥಿಗಳಿದ್ದ ತಂಡ ವಿವಿಧ ರೋಚಕ ಅನುಭವಗಳೊಂದಿಗೆ ತಮ್ಮ ಮನೆಗಳನ್ನು ಸೇರಿದರು.





  

No comments:

Post a Comment