Tuesday, December 16, 2014


ಕರ್ಮಣ್ಯೇವಾಧಿ ಕಾರಸ್ತೇ........
ಸ್ವರ್ಗ ಡಿ.೧೫ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆ ಸ್ವರ್ಗದ ಪರಿಸರ  ಕ್ಲಬ್‌ನ ನೇತೃತ್ವದಲ್ಲಿ ಶಾಲಾ ಕೈತೋಟ ಹಾಗೂ ಬಾಳೆತೋಟದ ಬೆಳವಣಿಗೆ ನಡೆಯುತ್ತಿದೆ.ವಿದ್ಯಾರ್ಥಿಗಳಲ್ಲಿ ಕೃಷಿ ಆಭಿರುಚಿಯನ್ನು ಮತ್ತು ಪರಿಸರ ಸ್ನೇಹವನ್ನು ಬೆಳೆಸಲು ಪರಿಸರ ಕ್ಲಬ್‌ನ ಸದಸ್ಯರು ನಿರಂತರ ಕಾರ್ಯವೆಸಗುತ್ತಿರುವುದು ಪ್ರಶಂಸನೀಯ. ತಾವು ತಮ್ಮ ಬಾಳೆತೋಟದಲ್ಲಿ ಬೆಳೆಸಿದ ನೇಂದ್ರ ಬಾಳೆಕಾಯಿಯನ್ನು ನಿರಂತರ ಗಮನಿಸಿ ಅದನ್ನು ಮಾಗುವ ವರೇಗೆ ಕಾದು ಶಾಲಾ ಪೋಷಕಾಂಶ ವಿತರಣಾ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಹಂಚಿತಿನ್ನಲು ಸಾಧ್ಯವಾದುದು ಮಕ್ಕಳ ನಿಸ್ವಾರ್ಥ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.ವಿದ್ಯಾರ್ಥಿಗಳ ಕೃಷಿಕೆಲಸಗಳಿಗೆ ಶಿಕ್ಷಕ ವೆಂಕಟ ವಿದ್ಯಾಸಾಗರ್,ಸಹಾಯಕ ರಾಧಾಕೃಷ್ಣ.ಎಸ್.ಹಾಗೂ ಅಧ್ಯಾಪಕರು ಸಾಂದರ್ಭಿಕ ಸಹಾಯಗಳನ್ನು ನೀಡುತ್ತಿರುವರು.  

No comments:

Post a Comment