Tuesday, December 16, 2014



ಮುದ ನೀಡಿದ ಶಾಲಾ ಪ್ರವಾಸ



ಸ್ವರ್ಗ:ದ.5.ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ದಶಂಬರ್ 5ರಂದು ಶೈಕ್ಷಣಿಕ ಪ್ರವಾಸ ಕೈಗೊಂಡರು. ಸುಮಾರು76ವಿದ್ಯಾರ್ಥಿಗಳು 40ಜನ ಪೋಷಕರು 10ಮಂದಿ ಶಿಕ್ಷಕರೊಂದಿಗೆ  ಕಲ್ಲಡ್ಕದ ನರಹರಿ ಪರ್ವತ,ಬಜಪೆ ವಿಮಾನ ನಿಲ್ದಾಣ,ಪಿಲಿಕುಳ ನಿಸರ್ಗಧಾಮ ಹಾಗೂ ಸಮುದ್ರ ಕಿನಾರೆಯಲ್ಲಿ ಮನಬಿಚ್ಚಿ ಸಂಭ್ರಮಿಸಿದರು. ದೇಶ ಸುತ್ತು, ಕೋಶ ಓದು ಎಂಬ ಜ್ಞಾನಾರ್ಜನೆಯನ್ನು ಸಾರುವ ಉಕ್ತಿಗೆ ಬೆಂಬಲ ನೀಡಿ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ಮಕ್ಕಳ ಪೋಷಕರಲ್ಲಿ ಬಹುಪಾಲು ಮಹಿಳೆಯರೇ ಪಾಲುಗೊಂಡುದರಿಂದ ದೈನಂದಿನ ಗೃಹಕೃತ್ಯಗಳಲ್ಲಿ ತೊಡಗಿದ್ದವರಿಗೆ ಮೈಮನವನ್ನು ಪ್ರಕೃತಿಯಲ್ಲಿ ತೆರೆದಿರಿಸಿ ಸಂತಸ ಪಡಲು ಸಾಧ್ಯವಾಯಿತು. ಪಿ.ಟಿ.ಎ.ಅಧ್ಯಕ್ಷ ಶ್ರೀಲಕ್ಷ್ಮೀಪ್ರಿಯ ಶರಳಾಯ ,ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಹಾಗೂ ಮುಖ್ಯೋಪಾಧ್ಯಾಯ ಪಿ. ಶಿವರಾಮ್ ಭಟ್,ಸಹ ಶಿಕ್ಷಕರಾದ ಕೆ.ಶಿವರಾಮ ಭಟ್,ಬಿ, ಗೀತಾಕುಮಾರಿ,ಎಂ.ಬಿ.ಗೀತಾಂಜಲಿ,ಪದ್ಮನಾಭ.ಆರ್. ,ಸಚ್ಚಿದಾನಂದ.ಎಸ್, ಮಿಥುನ್.ವಿ.ಆರ್.ಮತ್ತು ಧನ್ಯಸುಧೀರ್ ನೇತೃತ್ವ ನೀಡಿದರು.


No comments:

Post a Comment