Thursday, July 2, 2015


ವಾಚನ ಸಪ್ತಾಹದ  ಸಮಾರೋಪ ಸಮಾರಂಭ
   ನಮ್ಮ ಶಾಲೆಯಲ್ಲಿ ವಾಚನ ಸಪ್ತಾಹದ ಸಮಾರೋಪ ಸಮಾರಂಭ ಜರಗಿತು. ಇದರ ಅಂಗವಾಗಿ ಮಕ್ಕಳು ತರಗತಿವಾರಾಗಿ ರಚಿಸಿದ ಹಸ್ತಪತ್ರಿಕೆಯನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಪದ್ಮನಾಭ ಶೆಟ್ಟಿ ಬಿಡುಗಡೆಗೊಳಿಸಿದರು. ಸ್ಪರ್ಧಾತ್ಮಕ ಯುಗದಲ್ಲಿ ಅಸ್ಥಿತ್ವ ಸ್ಥಾಪಿಸಲು ಅಪಾರ eನ ಭಂಡಾರದ ಅಗತ್ಯವಿದೆ. ಇದನ್ನು ಸಾಧಿಸಲು ನಾವು ಪುಸ್ತಕ ಪ್ರೇಮಿ ಹವ್ಯಾಸಿಗಳು ಆಗಬೇಕು. ಆಧುನಿಕ ಮಾಧ್ಯಮದ ಪ್ರಭಾವ ಓದನ್ನು ಕುಂಠಿತಗೊಳಿಸುತ್ತದೆ. ಆದರೆ ಓದಿನ ಮಹಾಯಜ್ಞದಲ್ಲಿ ಭಾಗಿಯಾಗುವ ಮಹಾನ್ ಭಾಗ್ಯ ನಿಮಗೆ ದೊರೆತಿದೆ ಎಂದು ಅವರು ತಮ್ಮ ಉಧ್ಘಾಟನಾ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀಪ್ರಿಯ ಶರಳಾಯರು ಓದೋಣ, ಓದಿದನ್ನು ಅರ್ಥೈಯಿಸಿಕೊಳ್ಳೋಣ, ಅದನ್ನು ಜೀವನದಲ್ಲಿ ಅಳವಡಿಸೋಣ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಪಡಿಸಿದರು. ತಾವು ಓದಿದ ಪುಸ್ತಕದ ವಿಮರ್ಶೆ ಮಕ್ಕಳಿಂದ ಹಾಗೂ ಶಿಕ್ಷಕರಿಂದ ನಡೆಯಿತು. ವಿದ್ಯಾರ್ಥಿಗಳಾದ ತಿಲಕ್‌ರಾಜ್ ಹಾಗೂ ಅಭಯ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಶ್ವೇತಾ, ವಿದ್ಯಾಲಕ್ಷ್ಮಿ ಹಾಗೂ ಮಮತ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿ, ಶಿಕ್ಷಕ ಕೆ.ಶಿವರಾಮ್ ಭಟ್ ಧನ್ಯವಾದಗೈದರು. 







No comments:

Post a Comment