Tuesday, July 7, 2015


ಬಯೋಗ್ಯಾಸ್ ಪ್ಲಾಂಟ್‌ನ ಉದ್ಘಾಟನಾ ಕಾರ್ಯಕ್ರಮ

      ನಮ್ಮ ಶಾಲೆಯಲ್ಲಿ ನೇಚರ್ ಕ್ಲಬಿನ ವತಿಯಿಂದ ಬಯೋಗ್ಯಾಸ್ ಪ್ಲಾಂಟ್‌ನ ಉದ್ಘಾಟನಾ ಕಾರ್ಯಕ್ರಮ ಜರಗಿತು. ಕೇರಳ ರಾಜ್ಯ ಕೃಷಿ ಇಲಾಖೆ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತ್‌ನ ಸಹಯೋಗದೊಂದಿಗೆ ಲಭಿಸಿದ ಬಯೋಗ್ಯಾಸ್ ಪ್ಲಾನ್ಟ್‌ನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಜೆ.ಎಸ್ ರವರು ಗ್ಯಾಸ್ ಸ್ಟವ್‌ನ್ನು ಉರಿಸುವುದರ ಮುಖಾಂತರ ಉಧ್ಘಾಟಿಸಿದರು. ಎಣ್ಮಕಜೆ ಕೃಷಿಭವನದ ಕೃಷಿ ಅಧಿಕಾರಿ ಶ್ರೀಮತಿ ಮೀರಾರವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಜೈವಿಕ ಅವಶೇಷಗಳ ಸೂಕ್ತ ಸಂಸ್ಕರಣೆ, ಶಾಲಾ ಕೈತೋಟಕ್ಕೆ ಉತ್ತಮ ಸಾವಯವ ಗೊಬ್ಬರ ತಯಾರಿ, ಮಕ್ಕಳ ದಿನ ನಿತ್ಯದ ಕುಡಿನೀರಿಗಾಗಿ ಬಿಸಿನೀರಿನ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಅಡುಗೆ ಅನಿಲ ತಯಾರಿ ಈ ಮೂರು ಧ್ಯೇಯವನ್ನು ಈ ಯೋಜನೆಯಿಂದ ಸಿದ್ಧಿಸಲು ಸಾಧ್ಯ  ಎಂದರು.
ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಶ್ರೀ ಕರುಣಾಕರ್ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಿಪ್ರಿಯ ಶರಳಾಯ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ನೇಚರ್ ಕ್ಲಬಿನ ಸದಸ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿ, ಶಿಕ್ಷಕ ಸಚ್ಚಿದಾನಂದ.ಎಸ್ ವಂದಿಸಿದರು.





No comments:

Post a Comment