ವಿಶ್ವ ವೈದ್ಯರ ದಿನಾಚರಣೆ
ಜನ ಸಾಮಾನ್ಯರ ಆರೋಗ್ಯವನ್ನು ರಕ್ಷಿಸುವ, ಅನಾರೋಗ್ಯ ಪೀಡಿತರಾದಾಗ ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ, ಮರುಜನ್ಮ ನೀಡುವ ಹಾಗೂ ರೋಗಿಗಳಿಗೆ ಸಾಂತ್ವನ ನೀಡುವ ಸಲುವಾಗಿ ಹಗಲಿರುಳು ಶ್ರಮಿಸುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವವುದರ ಜೊತೆಗೆ ಡಾ.ಬಿ.ಸಿ ರಾಯ್ ಇವರ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಶಾಲಾ ಪರಿಸರದ ವೈದ್ಯರಾಗಿರುವ, ಎಂಡೋಸಲ್ಫಾನ ಸಿಂಪಡನೆಯ ವಿರುದ್ಧ ಹೋರಾಟ ನಡೆಸಿದ ಮೋಹನ್ ಕುಮಾರ್ ವೈ.ಎಸ್ ಇವರ ಕ್ಲಿನಿಕ್ಗೆ ವಿeನ ಸಂಘದ ಸದಸ್ಯರು ಹಾಗೂ ಸಂಚಾಲಕ ಶಿಕ್ಷಕ ವೆಂಕಟ ವಿದ್ಯಾಸಾಗರರವರು ತೆರಳಿ ಪುಷ್ಪ ಗುಚ್ಛ ಹಾಗೂ ಶುಭಾಷಯ ಪತ್ರ ನೀಡಿ ತಮ್ಮ ಸೇವೆಗೆ ಶುಭಾಷಯ ಕೋರಿದರು. ಶಾಲಾ ಎಸೆಂಬ್ಲಿಯಲ್ಲಿ ಸಂಘದ ಸದಸ್ಯೆ ಕುಮಾರಿ ಕವಿತಾಲಕ್ಷ್ಮಿ ವೈದ್ಯರ ದಿನದ ಆಚರಣೆಯ ಕುರಿತಾದ ಪ್ರಬಂಧ ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ.ಪಿ ಶಿವರಾಮ ಭಟ್ರವರು ಇನ್ನಷ್ಟು ಮಾಹಿತಿಯನ್ನಿತ್ತರು.
No comments:
Post a Comment