Wednesday, July 29, 2015


ಸಾಕ್ಷರ ಯೋಜನೆ-ಉದ್ಘಾಟನೆ

          ನಮ್ಮ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪುರೋಗತಿಗಾಗಿ ಸಾಕ್ಷರ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯನ್ನು ದಿನಾಂಕ:೨೮.೦೭.೨೦೧೫ನೇ ಮಂಗಳವಾರದಂದು ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಯೋಜನೆಯ ಪ್ರಯೋಜನವನ್ನು ಸರಿಯಾಗಿ ಸದುಪಯೋಗ ಪಡಿಸಿ, ಮುಂದಿನ ವರ್ಷಗಳಲ್ಲಿ ಎಲ್ಲರು ಓದು, ಬರಹಗಳಲ್ಲಿ ಪರಿಣತಿ ಪಡೆದು ತರಗತಿ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಈ ಸಂದರ್ಭದಲ್ಲಿ ಅವರು ನುಡಿದರು. ಸಂಸ್ಕ್ರತ ಶಿಕ್ಷಕರಾದ ಶ್ರೀ ಶಿವರಾಮ್ ಭಟ್.ಕೆ ಯವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
ಸಾಕ್ಷರ ಯೋಜನೆಯಲ್ಲಿ ಭಾಗಿಯಾಗಲು ಅರ್ಹತೆ ಪಡೆದ ಮಕ್ಕಳಿಗೆ ಬರವಣಿಗೆಗೆ ನೋಟು ಪುಸ್ತಕವನ್ನು ಪಿ.ಟಿ.ಎ ವತಿಯಿಂದ ನೀಡಲಾಯಿತು. ಎಲ್.ಪಿ ಮತ್ತು ಯು.ಪಿ ತರಗತಿಗಳಿಗೆ ಪ್ರತ್ಯೇಕ ಎರಡು ಗುಂಪು ಮಾಡಿ ಶಿಕ್ಷಕರೇ ತಯಾರಿಸಿದ ಮೊಡ್ಯುಲ್‌ನ್ನು ಉಪಯೋಗಿಸಿ ತರಗತಿಯನ್ನು ಆರಂಭಿಸಲಾಯಿತು. 




No comments:

Post a Comment