Monday, December 17, 2012

        ಶಿಕ್ಷಾ ಕಾ ಹಕ್ ಅಭಿಯಾನ್ ತಂಡ ಸ್ವರ್ಗ ದಲ್ಲಿ-
ಸರ್ವ ಶಿಕ್ಷಾ ಅಭಿಯಾನ್ ಹಾಗೂ ಡಯಟ್ ನೇತೃತ್ವದ ತಂಡವೊಂದು ಸ್ಥಳೀಯ ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಗೆ ಭೇಟಿಯಿತ್ತು ಶಾಲೆಯ ಒಟ್ಟು ವ್ಯವಸ್ಥೆಯ ಪರಿಶೀಲನೆ ನಡೆಸಿತು. ಮಕ್ಕಳಿಗೆ ಕೊಡಮಾಡುವ ಮಧ್ಯಾಹ್ನ ಊಟ, ಮಕ್ಕಳೇ ನಿಯಂತ್ರಿಸುತ್ತಿರುವ ಮೂತ್ರಾಲಯ- ಶೌಚಾಲಯಗಳು,ಅಚ್ಚುಕಟ್ಟಾದ ಶಾಲಾ ಗ್ರಂಥಾಲಯ, ತರಗತಿಗಳು, ಓದು ಮೂಲೆ, ಶುಚಿಯಾದ ಶಾಲಾ ವಠಾರ, ಕಂಪ್ಯೂಟರ್ ಲ್ಯಾಬ್ ಇವೇ ಮೊದಲಾದ ಪ್ರಧಾನ ವಿಷಯಗಳು ತಂಡದ ಮೆಚ್ಚುಗೆಗೆ ಪಾತ್ರವಾಯಿತು.

ಬಳಿಕ ನಡೆದ ರಕ್ಷಕ - ಶಿಕ್ಷಕ ಸಂಘದ ಕಾರ್ಯಕಾರೀ ಸಮಿತಿಯಲ್ಲಿ ಪರಿಶೀಲನಾ ತಂಡದ ನೇತೃತ್ವ ವಹಿಸಿದ್ದ ಬಿ.ಆರ್.ಸಿ. ಟ್ರೈನರ್ ಸತೀಶನ್ ಕೆ.ವಿ. ಮಾತನಾಡಿ ಸುತ್ತು ಮುತ್ತಲ ಶಾಲೆಗಳಿಗೆ ಎಲಾ ವಿಧದಲ್ಲೂ ಮಾದರಿ ಯಾಗಿರುವ ಈ ಶಾಲೆಗೆ ಬೆಸ್ಟ್ ಪಿ.ಟಿ.ಎ ಅವಾರ್ಡ್ ಸಿಕ್ಕಿದುದರಲ್ಲಿ ಯಾವುದೇ ಅತಿಶಯವಿಲ್ಲ.ಇದು ಶಾಲೆಯ ಒಟ್ಟು ವ್ಯವಸ್ಥೆಗೆ, ಹಿರಿಮೆಗೆ ಸಂದ ಗೌರವ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾರ್ಡ್ ಮೆಂಬರ್ ರವಿ.ಕೆ, ಮಾತೃ ಸಂಗಮದ ಅಧ್ಯಕ್ಷೆ ಶ್ರೀಮತಿ ರಾಧಿಕಾ ಶ್ರೀನಿವಾಸ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರೂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕದೊಂದಿಗೆ ಸ್ವಾಗತ ಕೋರಿದರು.ಶಾಲಾ ಹೆಲ್ಪ್ ಡೆಸ್ಕ್ನ ಶ್ರೀಮತಿ ಬಿ.ಗೀತಾ ಕುಮಾರಿ ವಂದಿಸಿದರು.ಕುಮಾರಿ ಅಶ್ವಿನಿ.ಯಂ ಹಾಗೂ ಬಿ.ಆರ್.ಸಿ. ಟ್ರೈನರ್ ಅಶ್ವತಿ ಅಜಕಪ್ಪ ತಂಡದ ಸದಸ್ಯರಾಗಿ ಸಹಕರಿಸಿದರು.

No comments:

Post a Comment