Monday, December 17, 2012

ಶಾಲಾ ಮಟ್ಟದ ಕಲೋತ್ಸವ
                 ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ದಿನಾಂಕ.19.10.2012 ರಂದು ಶಾಲಾ ಮಟ್ಟದ ಕಲೋತ್ಸವ ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀ.ಕೆ.ವೈ.ಸುಬ್ರಹ್ಮಣ್ಯ ಭಟ್ ರವರು ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕರಾದ ಸಚ್ಚಿದಾನಂದ.ಎಸ್. ಕಾರ್ಯಕ್ರಮದ ನೇತೃತ್ವವಹಿಸಿದರು. ಎಲ್.ಪಿ,ಯು.ಪಿ ವಿಭಾಗಗಳಿಗೆ ಲಘು ಸಂಗೀತ,ಕಂಠಪಾಠ,ಶಾಸ್ತ್ರೀಯ ಸಂಗೀತ, ಭಾಷಣ, ಸಮೂಹಗಾನ, ದೇಶಭಕ್ತಿಗಾನ, ಪೆನ್ಸಿಲ್ ಡ್ರಾಯಿಂಗ್, ವಾಟರ್ ಕಲರ್, ಕವಿತಾ ರಚನೆ, ಕಥಾ ರಚನೆ ಇತ್ಯಾದಿ ಜನರಲ್ ವಿಭಾಗದ ಸ್ಪರ್ಧೆಯ ಜೊತೆಗೆ ಸಂಸ್ಕೃತೋತ್ಸವದ ಸ್ಪರ್ಧೆಗಳನ್ನು ನಡೆಸಲಾಯಿತು. ತಮ್ಮ ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದವರನ್ನು ಉಪಜಿಲ್ಲಾ ಮಟ್ಟದ ಕಲೋತ್ಸವಕ್ಕೆ ಆಯ್ಕೆ ಮಾಡಲಾಯಿತು.
 



No comments:

Post a Comment