ಶಾರದಾ ಪೂಜೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿವಿಜಯದಶಮಿ ಆಚರಣೆ ಜರಗಿತು. ನವರಾತ್ರಿ ಕೊನೆದಿನ ವಿದ್ಯೆಯ ಅಧಿ ದೇವತೆ ಸರಸ್ವತಿ ಪೂಜೆಯನ್ನು ಪುರೋಹಿತ ಶರತ್ ಕುಮಾರ್ ಪೆರ್ಲ ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ಸಾಮೂಹಿಕ ಭಜನೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ವೈ.ಸುಬ್ರಹ್ಮಣ್ಯ ಭಟ್ರವರು ನವರಾತ್ರಿ ದಿನದ ವೈಶಿಷ್ಟ್ಯವನ್ನು ಮಕ್ಕಳಿಗೆ ತಿಳಿಸಿದರು. ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಆಗಮಿಸಿದರು. ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಯಿತು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
No comments:
Post a Comment