Thursday, December 13, 2012


ಮಾ-ಬೇಠಿ ಸಮ್ಮೀಲನ್
     ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಸಿ.ಆರ್.ಸಿ. ಮಟ್ಟದ ಮಾ-ಬೇಟೀ ಸಮ್ಮಿಲನ್ ಎಂಬ ವಿಶಿಷ್ಟ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಯಲ್ಲಾಗುವ ಬದಲಾವಣೆ, ಈ ಹಂತದಲ್ಲಿ ಕಾಡುವ ಸಮಸ್ಯೆಗಳು, ಆಧುನಿಕ ವಸ್ತ್ರ ವಿನ್ಯಾಸದ ಉಡುಗೆ-ತೊಡುಗೆ, ತಾಯಿ ಮಗುವಿನ ಬಾಂಧವ್ಯಗಳ    ಕುರಿತಾಗಿ ಮುಕ್ತವಾಗಿ ಚರ್ಚಿಸಲಾಯಿತು. ಪ್ರಚಲಿತ ಸಮಾಜದಲ್ಲಿ ಕಂಡು ಬರುವ ಸಾಮಾಜಿಕ ಸಮಸ್ಯೆಗಳಾದ ಮೊಬೈಲ್ ಅವಾಂತರ, ಮನೆಯ ಹಿರಿಯರಿಂದ ಲಭಿಸಬೇಕಾದ ಪ್ರೀತಿ, ವಾತ್ಸಲ್ಯದ ಕೊರತೆಯಿಂದಾಗುವ ಅನಾಹುತಗಳನ್ನು ವಿಡಿಯೋ ಕ್ಲಿಪ್‌ನ ಮೂಲಕ ಪ್ರದರ್ಶಿಸಿ ಚರ್ಚಿಸಲಾಯಿತು.
             

 ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹಾಗೂ ನೆರೆಯ ವಾಣೀನಗರ ಪ್ರೌಢ ಶಾಲೆಯ ಒಟ್ಟು62 ಮಂದಿ ಭಾಗವಹಿಸಿದರು. ಬಿ.ಆರ್.ಸಿ. ತರಬೇತುದಾರರಾದ ಶ್ರೀ ಲಕ್ಷ್ಮೀಪ್ರಿಯ ಸರಳಾಯ ಹಾಗು ಶ್ರೀಮತಿ ಜಯಶ್ರೀ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ರವರ ಅಧ್ಯಕ್ಷತೆಯಲ್ಲಿ, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ.ಯವರು ಔಪಚಾರಿಕವಾಗಿ ಉದ್ಘಾಟಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದಿಸಿದರು.                

No comments:

Post a Comment