Wednesday, December 12, 2012


                  ‘ಸ್ವರ್ಗ’ದಲ್ಲಿ ಯಕ್ಷಗಾನ ಹಿಮ್ಮೇಳ ಪ್ರಾತ್ಯಕ್ಷಿಕೆ-
                     ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಯಕ್ಷಗಾನ ಹಿಮ್ಮೇಳನದ ಪ್ರಾತ್ಯಕ್ಷಿಕೆ ನಡೆಯಿತು. 4ನೇ ತರಗತಿಯ  ಕಲಿಕಾ ಚಟುವಟಿಕೆಯ ಭಾಗವಾಗಿ   ಪಂಚವಟಿ ಪ್ರಸಂಗದ ಆಯ್ದ ಪದ್ಯಗಳನ್ನು ನವರಸ ಭರಿತವಾಗಿ ಖ್ಯಾತ ಭಾಗವತ  ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರು ಹಾಡಿ ಎಲ್ಲರ ಮನರಂಜಿಸಿದರು. ಯಕ್ಷಗಾನ ಮೇಳದ ಕಲಾವಿದ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಪಡ್ರೆ ಶ್ರೀಧರ ರವರು ಚೆಂಡೆ ಹಾಗೂ ಪಿಟಿಎ ಅಧ್ಯಕ್ಷ ಶ್ರೀ ವಿವೇಕಾನಂದ.ಬಿಕೆ. ಯವರು ಮೃದಂಗ ವಾದನದಲ್ಲಿ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಕಲಾವಿದರೊಂದಿಗೆ ೪ನೇ ತರಗತಿಯ ಮಕ್ಕಳು ಪಠ್ಯಚಟುವಟಿಕೆಗೆ ಪೂರಕವಾಗಿ ಸಂದರ್ಶನ ನಡೆಸಿದರು. ಈ ಪ್ರಾತ್ಯಕ್ಷಿಕೆಯ ನೇತೃತ್ವವನ್ನು ಕೊಲ್ಲೆಂಕಾನ ಅವಿನಾಶ್ ಶಾಸ್ತ್ರಿಯವರು ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ರವರು ಸ್ವಾಗತಿಸಿದರು. ಅತಿಥಿ ಕಲಾವಿದರಿಗೆ ಪಿ.ಟಿ.ಎ. ಅಧ್ಯಕ್ಷರು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಶಿಕ್ಷಕ ಸಚ್ಚಿದಾನಂದ.ಎಸ್. ರವರು ಕಾರ್ಯಕ್ರಮವನ್ನು ನಿರೂಪಿಸಿದರು. 
 





 

No comments:

Post a Comment