ಚಾಂದ್ರ ದಿನ - ಜುಲೈ21
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಚಾಂದ್ರ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಜರಗಿತು. ದೈನಂದಿನ ಎಸೆಂಬ್ಲಿಯಲ್ಲಿ ಚಾಂದ್ರಯಾನ ದಿನದ ವೈಶಿಷ್ಟ್ಯವನ್ನು ಪ್ರಬಂಧ ರೂಪದಲ್ಲಿ ಮಂಡಿಸಲಾಯಿತು. ಚಾಂದ್ರಯಾನದ ಎನಿಮೇಶನ್ ಸಿಡಿಯನ್ನು ಪ್ರದರ್ಶಿಸಿ, ಅದಕ್ಕೆ ಪೂರಕ ಮಾಹಿತಿಯನ್ನು ಶಿಕ್ಷಕ ವೆಂಕಟವಿದ್ಯಾಸಾಗರ್ ರವರು ತಿಳಿಸಿದರು.ಬಳಿಕ ಮಕ್ಕಳಿಗೆ ರಸಪ್ರಶ್ನಾ ಕಾರ್ಯಕ್ರಮ ನಡೆಸಲಾಯಿತು. ಚಾಂದ್ರಯಾನ ದಿನಕ್ಕೆ ಅನುಗುಣವಾಗಿ ಮಕ್ಕಳು ಸಂಗ್ರಹಿಸಿದ ಮಾಹಿತಿಯನ್ನು ಶಾಲಾ ಬಾಲೋದ್ಯಾನದಲ್ಲಿ ಅನಾವರಣಗೊಳಿಸಲಾಯಿತು.
No comments:
Post a Comment