Saturday, September 29, 2012


 ಶಿಕ್ಷಕ ದಿನಾಚರಣೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಮಕ್ಕಳ ನೇತೃತ್ವದಲ್ಲಿ ಜರಗಿದ ಶಿಕ್ಷಕ  ದಿನಾಚರಣೆಯು ಒಂದು ಹೊಸ ಅನುಭವಕ್ಕೆ ಸಾಕ್ಷಿಯಾಯಿತು.
ಪ್ರತಿಯೋರ್ವ ಅಧ್ಯಾಪಕರಿಗೂ ಮಕ್ಕಳು ಹೂಗುಚ್ಛ,ಗ್ರೀಟಿಂಗ್‌ಕಾರ್ಡ್ ನೀಡಿ ಶುಭ ಕೋರಿದರು.ಆಶುಭಾಷಣ, ಶಿಕ್ಷಕರಿಗೆ ಹೆಕ್ಕಿ ಅಭಿನಯ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳಿಗೆ ಮಕ್ಕಳೇ ತೀರ್ಪುಗಾರರಾಗಿದ್ದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.ಮಕ್ಕಳ ಪ್ರಾಯೋಜಕತ್ವದಲ್ಲಿ ಸಂಸ್ಕೃತ ಶಿಕ್ಷಕ ಶ್ರೀ ಕೆ.ಶಿವರಾಮ್ ಭಟ್ ರವರು ವಿಜೇತ ಅಧ್ಯಾಪಕರಿಗೆ ಬಹುಮಾನ ವಿತರಿಸಿದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ ಹಾಗೂ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ರವರ ಸಮ್ಮುಖದಲ್ಲಿ ನಮ್ಮಶಾಲೆಯಲ್ಲಿ ಸುಮಾರು ೩೦ವರ್ಷಗಳ ವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಸರವು ಶ್ರೀ ಸುಬ್ರಹ್ಮಣ್ಯ ಭಟ್ ಹಾಗೂ  ಪುತ್ತೂರು ಫೀಲೋಮಿನ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿರುವ ಕೋಟೆ ಶ್ರೀ ವೆಂಕಟರಮಣ ಭಟ್ ಇವರ ಸ್ವ ಗೃಹದಲ್ಲಿ ಶಾಲು ಹೊದೆಸಿ,ಫಲ ತಾಂಬೂಲವನ್ನು ನೀಡಿ ಗುರುವಂದನಂ ಸಲ್ಲಿಸಲಾಯಿತು.           

                                                       

                                

No comments:

Post a Comment