Tuesday, September 18, 2012

ಸ್ವರ್ಗದಲ್ಲಿ ಬಾಂಬ್ ಸ್ಫೋಟ - ಹಲವರಿಗೆ ಗಾಯ, ಕೆಲವರು ಆಸ್ಪತ್ರೆಗೆ.

      ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಸಮಾಜ ಹಾಗೂ ವಿಜ್ಞಾನ ಕ್ಲಬಿನ ಜಂಟಿ ಆಶ್ರಯದಲ್ಲಿ ಹಿರೋಶಿಮ ಮತ್ತು ನಾಗಸಾಕಿ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ಹಿರೋಶಿಮ, ನಾಗಸಾಕಿ ನಗರಗಳಲ್ಲಾದ ಅಣುಬಾಂಬ್ ದಾಳಿ ಪ್ರಕರಣವನ್ನು ಮಕ್ಕಳು ಬಾಂಬ್ ಸ್ಫೋಟಕ್ಕೆ ಬಲಿಯಾಗುವಂತೆ, ಸುಟ್ಟುಗಾಯಗೊಂಡವರಂತೆ,ಪ್ರಾಣಾಪಾಯದಿಂದ ಪಾರಾದವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವ ದೃಶ್ಯಗಳ ಪ್ರಾತ್ಯಕ್ಷಿಕೆ ನೀಡಿದರು.
      ಹಿರೋಶಿಮಾ ನಾಗಸಾಕಿ ದಿನದ ಹಿನ್ನಲೆ, ಅಣುಬಾಂಬ್ ದಾ ಳಿಯಿಂದಾದ ನಾಶ ನಷ್ಟಗಳ ಸವಿವರ ಪ್ರಬಂಧವನ್ನು ವಿಧ್ಯಾರ್ಥಿನಿಯರಾದ ಕುಮಾರಿ ಉಷಾ ಹಾಗೂ ಅನುಶ್ರೀ ಯವರು ಮಂಡಿಸಿದರು. ಈ ದುರ್ಘಟನೆಯ ಕುರಿತಾದ ನೆನೆಪಿಗಾಗಿಎಂಬ ಕಾವ್ಯವನ್ನು ಶ್ರೀ ರಮಣ ಭಾರಧ್ವಜ್ ವಾಚಿಸಿದನು.

                                                                               




No comments:

Post a Comment