Tuesday, September 4, 2012

       ಬಾಲ ಗಂಗಾಧರ ತಿಲಕ್ ಜನ್ಮದಿನ-ಜುಲೈ.23       

         ಭಾರತ ಸ್ವಾತಂತ್ರ್ಯಕ್ಕೆ ಹೋರಡಿದ ಧೀಮಂತ ನಾಯಕರಲ್ಲಿ ಬಾಲಗಂಗಾಧರ ತಿಲಕ್ ಒಬ್ಬರು. ಕೇಸರಿಹಾಗೂ ಬಂಗಾಳ ಗಜೆಟೆಂಬ ಪತ್ರಿಕೆಗಳ ಮೂಲಕ ಬ್ರಿಟಿಷರ ದಬ್ಬಾಳಿಕೆಯ ಸಚಿತ್ರ ಲೇಖನ ಬರೆದು,ಜನ ಜಾಗೃತಿ ಮೂಡಿಸಿದ ವೀರ. ಇವರ ಜನ್ಮದಿನಾಚಣೆಯ ಅಂಗವಾಗಿ 7ನೇ ತರಗತಿಯ ವಿದ್ಯಾರ್ಥಿ ಕೌಶಿಕ್ ಘಾಟೆ ಬಾಲ ಗಂಗಾಧರ ತಿಲಕ್ ರವರ ವೇಷಧಾರಿಯಾಗಿ ಅವರ ವ್ಯಕ್ತಿ ಪರಿಚಯವನ್ನು ಮಾಡಿದನು. ಈ ಸಂದರ್ಭದಲ್ಲಿ ಅವರೊಂದಿಗೆ ಸಂದರ್ಶನ ನಡೆಯಿತು. ಮಕ್ಕಳ ರೇಡಿಯೋ ಕೇಂದ್ರದಲ್ಲಿ ಅವರ ಜೀವನ ಚರಿತ್ರೆಯನ್ನು ಓದಲಾಯಿತು. ಮುಖ್ಯೋಪಾಧ್ಯಾಯ ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ರವರು ತಿಲಕರ ಜೀವನ ಆದರ್ಶಗಳನ್ನು ವಿವರಿಸಿ ಮಕ್ಕಳಲ್ಲಿ ಸ್ಪೂರ್ತಿ ತುಂಬಿದರು.


No comments:

Post a Comment