Tuesday, September 18, 2012




   ಸ್ವರ್ಗ - ಶಾಲಾ ಮಟ್ಟದ ಸಂಸ್ಕೃತ ದಿನಾಚರಣೆ.

       ಶ್ರಾವಣ ಹುಣ್ಣಿಮೆಯ ಪ್ರಯುಕ್ತ ಸಂಸ್ಕೃತ ಕ್ಲಬ್ ನ ವತಿಯಿಂದ ಸಂಸ್ಕೃತ ದಿನದ ಆಚರಣೆಯು  ನಮ್ಮ ಶಾಲೆಯಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.









ಸಂಸ್ಕೃತ ದಿನದ ಪ್ರಯುಕ್ತ, ಸಂಸ್ಕೃತ ಅಧ್ಯಾಪಕ ಕೆ.ಶಿವರಾಮ.ಭಟ್ ಅವರ ನೇತೃತ್ವದಲ್ಲಿ ನಡೆದ ಸಂಸ್ಕೃತ ನಾಮಧೇಯದ ನಿತ್ಯೋಪಯೋಗಿ ವಸ್ತುಗಳ ವಸ್ತು ಪ್ರದರ್ಶನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ಮಾತೃ ಭಾಷೆ. ದೇವ ಭಾಷೆಯಾಗಿರುವ ಇದನ್ನು ಅಭ್ಯಾಸ ಮಾಡುವುದರಿಂದ ನಮ್ಮಲ್ಲಿ ಉತ್ತಮ ಸಂಸ್ಕಾರ ಮೂಡುವುದು ಎಂದು ಹಿತವಚನ ವಿತ್ತರು.
          ಮಕ್ಕಳಿಂದ ಸಮೂಹಗೀತೆ, ಅಭಿನಯಗೀತೆ,ನಾಟಕ ಮೊದಲಾದ ಕಾರ್ಯಕ್ರಮಗಳು ಜರಗಿತು. ಸಂಸ್ಕೃತದ ಎಲ್ಲಾ ಮಕ್ಕಳನ್ನು ಸೇರಿಸಿ ಆಯೋಜಿಸಿದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು. ಮಾಸ್ಟರ್ ಸುಬ್ರಹ್ಮಣ್ಯ.ಎನ್ ಕಾರ್ಯಕ್ರಮ ನಿರೂಪಿಸಿ,ಕುಮಾರಿ ರೇಷ್ಮ ಎಸ್ ವಂದಿಸಿದರು.                                








 

No comments:

Post a Comment