Monday, September 17, 2012


ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
           ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸಲ್ಪಡುವ ವ್ರತವರ ಮಹಾಲಕ್ಷ್ಮೀ ಪೂಜೆಯನ್ನು ನಮ್ಮ ಶಾಲಾ ಮಾತೃ ಸಂಗಮದ ವತಿಯಿಂದ ಶಾಲಾ ವಠಾರದಲ್ಲಿ ಆಚರಿಸಲಾಯಿತು. ಪುರೋಹಿತ ಶ್ರೀಧರ ಭಟ್ ರವರ ನೇತೃತ್ವದಲ್ಲಿ ಹಿರಿಯ ಮುತ್ತೈದೆ ಶ್ರೀಮತಿ ಸುಶೀಲ ಶಿರಂತಡ್ಕ ಇವರು ಪೂಜೆಯನ್ನು ನೆರವೇರಿಸಿದರು. ಪೂಜೆಗೆ ಆಗಮಿಸಿದ ಸುಮಂಗಲಿಯರಿಗೆ ಅರಶಿನ, ಕುಂಕುಮ ಹಚ್ಚಿ, ಹೂ ನೀಡಿ ಸ್ವಾಗತಿಸಲಾಯಿತು.  ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ, ಸಕಲೈಶ್ವರ್ಯವನ್ನು ಕರುಣಿಸಲೆಂದು ಮಹಾಲಕ್ಷ್ಮಿಯನ್ನು ಪ್ರಾರ್ಥಿಸಲಾಯಿತು. ಸುಮಾರು ೪೦೦ಕ್ಕೂ ಅಧಿಕ ಮಂದಿ ಮುತ್ತೈದೆಯರು ಆಗಮಿಸಿ ಶ್ರೀ ವರ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಿದ್ದು, ಸುಮಾರು ೬೭೦ ಪೂಜೆಗಳು ನೊಂದವಣೆಗೊಂಡವು. ಪೂಜೆಗೆ ಆಗಮಿಸಿದ ಭಕ್ತಾದಿಗಳಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಈ ರೀತಿ ಸಾಮೂಹಿಕ ಪೂಜೆಗಳಿಂದ ಸಮಾಜದಲ್ಲಿ ಧಾರ್ಮಿಕ ಜಾಗೃತಿಯುಂಟಾಗಿ ಸಾಮಾಜಿಕ ಸಾಮರಸ್ಯವು ಬೆಳೆಯುತ್ತದೆ.
 ಕಳೆದ ಶೈಕ್ಷಣಿಕ ವರ್ಷಗಳಿಂದ ನಮ್ಮ ಶಾಲಾವಿದ್ಯಾರ್ಥಿಗಳಿಗೆ    ಉಚಿತ ಹೊಲಿಗೆ ತರಬೇತಿಯನ್ನು ನೀಡುವ ಮಾತೃ ಸಂಘದ ಸದಸ್ಯೆಯರಾದ  ಶ್ರೀಮತಿ ಅನುರೂಪ ಕೆದಂಬಾಯಿಮೂಲೆ ಹಾಗೂ ಶ್ರೀಮತಿ ಅರ್ಚನಾ ಪೆರಿಕ್ಕಾನ ಇವರನ್ನು ಮಾತೃ ಸಂಘದ ಪರವಾಗಿ ಹಿರಿಯ ಮುತ್ತೈದೆ ಶ್ರೀಮತಿ ಸುಶೀಲ ಶಿರಂತಡ್ಕ ಇವರು ಕಿರು ಕಾಣಿಕೆಯನ್ನು ನೀಡಿ ಗೌರವಿಸಿದರು.














No comments:

Post a Comment