Tuesday, September 4, 2012




ಮಾತೃ ಮಂಡಳಿ ಸಭೆ

ಮಾತೃ ಸಂಗಮದ ಅಧ್ಯಕ್ಷೆ ಶ್ರೀಮತಿ ರಾಧಿಕಾ ಎಡಮಲೆಯವರ ಅಧ್ಯಕ್ಷತೆಯಲ್ಲಿ ಸಾಯಂಕಾಲ 3.೦೦ ಗಂಟೆಗೆ ಮಾತೃ ಮಂಡಳಿಯ ವಿಶೇಷ ಸಭೆ ಜರಗಿತು.ಜುಲೈ ತಿಂಗಳ 27ನೇ ತಾರೀಕಿನಂದು ಆಚರಿಸುವ ಶ್ರೀ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಪೂರ್ವಭಾವಿಯಾಗಿ ನಡೆದ ಈ ಸಭೆಯಲ್ಲಿ ಪೂಜಾ ಶುಲ್ಕ, ರಶೀದಿ ಪುಸ್ತಕಗಳು, ಕರಪತ್ರ, ಬೇನರ್, ಪೂಜಾ ಸಮಯ, ಪ್ರಸಾದ ವಿತರಣೆ, ಕ್ಲಿನಿಂಗ್, ಲಲಿತಾ ಸಹಸ್ರನಾಮ ಪಾರಾಯಣ, ಇತ್ಯಾದಿ ಹಲವು ವಿಚಾರಗಳನ್ನು ಮುಖ್ಯೋಪಾಧ್ಯಾಯರ ಉಪಸ್ಥಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
       ಶಾಲಾ ಹೂದೋಟದ ದುರಸ್ಥಿ ಎಂಬ ವಿಚಾರದ ಬಗ್ಗೆ ಚರ್ಚಿಸಿದಾಗ ಮುಖ್ಯೋಪಾಧ್ಯಾಯರು ಈಗಿರುವ ಹೂದೋಟದಿಂದ ಉತ್ತಮ ಗಿಡಗಳನ್ನು ಶಾಲಾ ಪರಿಸರದ ಯೋಗ್ಯ ಸ್ಥಳದಲ್ಲಿ ನೆಡಬೇಕೆಂದು ಹೇಳಿದರು. ಮಾತೃ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಗೀತಾ ಕುಮಾರಿಯವರು ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಗೀತಾಂಜಲಿಯವರು ಪ್ರಾರ್ಥಿಸಿ ಧನ್ಯವಾದವಿತ್ತರು.                           

No comments:

Post a Comment